alex Certify ಆಯುರ್ವೇದದ ಪ್ರಕಾರ ರಾತ್ರಿ ಊಟದ ನಿಯಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯುರ್ವೇದದ ಪ್ರಕಾರ ರಾತ್ರಿ ಊಟದ ನಿಯಮಗಳು

ರಾತ್ರಿ ಹೊಟ್ಟೆ ಭಾರವಾದಂತಾಗುವುದು, ಅಜೀರ್ಣದಂತಹ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತವೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಆಯುರ್ವೇದದ ಪ್ರಕಾರ ಇದಕ್ಕೆ ಕಾರಣ ನಾವು ಸೇವಿಸುವ ಕೆಲವೊಂದು ಆಹಾರಗಳು. ರಾತ್ರಿ ತಪ್ಪಾದ ಆಹಾರಗಳನ್ನು ತಿಂದರೆ ಈ ಸಮಸ್ಯೆ ಉಂಟಾಗುತ್ತದೆ. ರಾತ್ರಿಯಲ್ಲಿ ನಾವು ಸೇವನೆ ಮಾಡಬಾರದಂತಹ 5 ಪದಾರ್ಥಗಳು ಯಾವುವು ಅನ್ನೋದನ್ನು ನೋಡೋಣ.

ಸಂಸ್ಕರಿಸಿದ ಆಹಾರ ಮತ್ತು ತಿಂಡಿಗಳನ್ನು ರಾತ್ರಿ ತಿನ್ನಬಾರದು. ಇವು ಹೊಟ್ಟೆಯಲ್ಲಿ ಅಜೀರ್ಣವನ್ನು ಉಂಟುಮಾಡುತ್ತದೆ. ರಾತ್ರಿ ಹೊತ್ತು ಎಣ್ಣೆಯುಕ್ತ ಅಥವಾ ಕರಿದ ಆಹಾರವನ್ನು ಸೇವಿಸಬಾರದು. ಕರಿದ ಅಥವಾ ಜಿಡ್ಡಿನ ಪದಾರ್ಥಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಅಂತಹ ವಸ್ತುಗಳನ್ನು ಜೀರ್ಣಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಈ ಕಾರಣದಿಂದಾಗಿ, ಹೊಟ್ಟೆಯಲ್ಲಿ ವಿಷವು ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದು ಗ್ಯಾಸ್‌, ಹೊಟ್ಟೆ ಉಬ್ಬರಿಸುವುದು, ವಾಂತಿ-ಭೇದಿಗೆ ಕಾರಣವಾಗಬಹುದು.

ಅದಕ್ಕಾಗಿಯೇ ಸಾಧ್ಯವಾದಷ್ಟು ರಾತ್ರಿಯಲ್ಲಿ ಅಂತಹ ವಸ್ತುಗಳ ಸೇವನೆಯನ್ನು ತಪ್ಪಿಸಬೇಕು. ಆಯಾ ಋತುವಿನಲ್ಲಿ ಸಿಗುವ ಹಣ್ಣುಗಳ ಸೇವನೆ ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ರಾತ್ರಿಯಲ್ಲಿ ಅವುಗಳ ಸೇವನೆ ವಿಷಕ್ಕೆ ಸಮಾನ. ವಾಸ್ತವವಾಗಿ ಹಣ್ಣುಗಳು ತಂಪಾಗಿಸುವ ಪರಿಣಾಮವನ್ನು ಹೊಂದಿವೆ, ಆದ್ದರಿಂದ ಅವುಗಳನ್ನು ರಾತ್ರಿಯಲ್ಲಿ ತಿನ್ನುವುದರಿಂದ ಕೆಮ್ಮು, ಶೀತ, ಜ್ವರ ಮತ್ತು ದೇಹದಲ್ಲಿ ನೋವು ಉಂಟಾಗುತ್ತದೆ. ಹಣ್ಣುಗಳು ನಿಮಗೆ ಅಲರ್ಜಿ ಕೂಡ ಉಂಟುಮಾಡಬಹುದು. ಮಾಂಸಾಹಾರಿಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ರಾತ್ರಿಯಲ್ಲಿ ರೆಡ್‌ ಮೀಟ್‌ ತಿನ್ನಲು ಇಷ್ಟಪಡುತ್ತಾರೆ.

ಇದಕ್ಕೆ ಕಾರಣ ಈ ಮಾಂಸ ಸೇವನೆಯಿಂದ ದೇಹಕ್ಕೆ ಶಕ್ತಿಯ ಜೊತೆಗೆ ಶಾಖವೂ ಸಿಗುತ್ತದೆ. ಆದರೆ ಇದರ ಅಡ್ಡ ಪರಿಣಾಮವೆಂದರೆ ಅದು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಮಲಗಿದ ನಂತರ ಹೊಟ್ಟೆಯಲ್ಲಿ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ. ಈ ಕಾರಣಕ್ಕಾಗಿಯೇ ಆಯುರ್ವೇದ ತಜ್ಞರು ರಾತ್ರಿಯಲ್ಲಿ ರೆಡ್‌ ಮೀಟ್‌ ಸೇವಿಸದಂತೆ ಸೂಚಿಸುತ್ತಾರೆ.  ಮೊಸರಿನ ಸೇವನೆಯು ಹೊಟ್ಟೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ಆಯುರ್ವೇದದ ಪ್ರಕಾರ ರಾತ್ರಿಯಲ್ಲಿ ಮೊಸರು ತಿನ್ನಬಾರದು. ಮೊಸರು ಭಾರವಾದ ವಸ್ತು, ಇದು ಜೀರ್ಣವಾಗಲು ಸಮಯ ಬೇಕು.

ರಾತ್ರಿ ಮೊಸರು ತಿಂದರೆ ಶೀತ, ಎದೆಯಲ್ಲಿ ಬಿಗಿತ, ಕಣ್ಣಿನ ಪೊರೆಯಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೊಟ್ಟೆಯ ಅಸ್ವಸ್ಥತೆಯನ್ನು ತಪ್ಪಿಸಬೇಕೆಂದರೆ ರಾತ್ರಿ ಬೇಗನೆ ಊಟ ಮಾಡಬೇಕು. ಪ್ರತಿ ರಾತ್ರಿ ಮಲಗುವ 3 ಗಂಟೆಗಳ ಮೊದಲು ಆಹಾರವನ್ನು ಸೇವಿಸಬೇಕು, ಇದರಿಂದ ಜೀರ್ಣಾಂಗ ವ್ಯವಸ್ಥೆಯು ಅದನ್ನು ಜೀರ್ಣಿಸಿಕೊಳ್ಳಲು ಪೂರ್ಣ ಸಮಯವನ್ನು ಪಡೆಯುತ್ತದೆ. ಈ ದಿನಚರಿಯನ್ನು ಅನುಸರಿಸುವ ಜನರು ಸಾಮಾನ್ಯವಾಗಿ ಗ್ಯಾಸ್, ಹೊಟ್ಟೆ ನೋವು ಮತ್ತು ಮಲಬದ್ಧತೆ-ಅತಿಸಾರದಿಂದ ಮುಕ್ತರಾಗುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...