alex Certify ಆಪ್​​ ತೊರೆದು ಬಿಜೆಪಿಗೆ ಸೇರಿದ್ದ ಕೌನ್ಸಿಲರ್​ ಆಮ್​ ಆದ್ಮಿ ಪಕ್ಷಕ್ಕೆ ವಾಪಸ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪ್​​ ತೊರೆದು ಬಿಜೆಪಿಗೆ ಸೇರಿದ್ದ ಕೌನ್ಸಿಲರ್​ ಆಮ್​ ಆದ್ಮಿ ಪಕ್ಷಕ್ಕೆ ವಾಪಸ್​​

ಫೆಬ್ರವರಿ 4ರಂದು ಪತಿ ಜಗದೀಶ್​ ಕುಕಾಡಿಯಾ ಜೊತೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಸೂರತ್​ನ ಮುನ್ಸಿಪಲ್​​ ಕಾರ್ಪೋರೇಷನ್​​ನ ಮಾಜಿ ಆಮ್​ ಆದ್ಮಿ ಪಕ್ಷದ ಕೌನ್ಸಿಲರ್​​ ಮನೀಶಾ ಕುಕಾಡಿಯಾ ಆಪ್​ಗೆ ಮರಳಿದ್ದಾರೆ. ಆಪ್​ನ ರಾಜ್ಯಾಧ್ಯಕ್ಷ ಗೋಪಾಲ್​ ತಾಲಿಯಾ ಹಾಗೂ ಗುಜರಾತ್​ನ ಆಪ್​ ಉಸ್ತುವಾರಿ ಗುಲಾಬ್​ ಸಿಂಗ್​ ಯಾದವ್​​ ಕುಕಡಿಯಾ ಹಾಗೂ ಪತಿ ಜಗದೀಶ್​ರನ್ನು ಸೂರತ್​​ನಲ್ಲಿ ಪಕ್ಷಕ್ಕೆ ಮರಳಿ ಸ್ವಾಗತಿಸಲಾಯ್ತು.

ಕುಕಡಿಯಾ ಜೊತೆಯಲ್ಲಿ ಆಪ್​ ಕೌನ್ಸಿಲರ್​ಗಳಾದ ವಿಪುಲ್​ ಮೊವಾಲಿಯಾ, ಭಾವನಾ ಸೋಲಂಕಿ. ರುತಾ ದುಧಾತಾರಾ ಹಾಗೂ ಜ್ಯೋತಿಕಾಬೆನ್​ ಲಾಥಿಯಾ ಫೆಬ್ರವರಿ ತಿಂಗಳಲ್ಲಿ ಗಾಂಧಿ ನಗರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಿದ್ದರು.

ಇದಾಗಿ ಕೆಲವೇ ದಿನಗಳ ಬಳಿಕ ಮತ್ತೊಬ್ಬ ಆಪ್​ ಕೌನ್ಸಿಲರ್​ ಕುಂದನ್​ ಕೋಥಿಯಾ ಕೂಡ ಕುಕಡಿಯಾ ಹೆಜ್ಜೆಯನ್ನೇ ಅನುಸರಿಸಿ ಬಿಜೆಪಿ ಸೇರ್ಪಡೆಯಾಗಿದ್ದರು.
ಕುಕಡಿಯಾ ಹಾಗೂ ಅವರ ಪತಿ 38 ದಿನಗಳ ಬಳಿಕ ಪುನಃ ಆಪ್​ಗೆ ಮರಳಿದ್ದಾರೆ. ಕುಕಡಿಯಾ ದಂಪತಿ ಪಕ್ಷಕ್ಕೆ ವಾಪಸ್ಸಾಗಿರುವ ಬಗ್ಗೆ ಆಪ್​ನ ರಾಜ್ಯ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...