alex Certify ಅಪಘಾತಕ್ಕೂ ಮುನ್ನ ಮದ್ಯ ಸೇವಿಸಿದ್ದನಾ ಕ್ರೂಸರ್ ಚಾಲಕ ? 9 ಜನರ ಸಾವಿಗೆ ಕಾರಣವಾಯ್ತಾ ಈ ಅಂಶ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತಕ್ಕೂ ಮುನ್ನ ಮದ್ಯ ಸೇವಿಸಿದ್ದನಾ ಕ್ರೂಸರ್ ಚಾಲಕ ? 9 ಜನರ ಸಾವಿಗೆ ಕಾರಣವಾಯ್ತಾ ಈ ಅಂಶ ?

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದ ಭೀಕರ ಅಪಘಾತದಲ್ಲಿ ಚಾಲಕ ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. 14 ಮಂದಿ ಗಾಯಗೊಂಡಿದ್ದು ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬದುಕು ಅರಸಿ ಇವರುಗಳು ರಾಯಚೂರು ಜಿಲ್ಲೆಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಕ್ರೂಸರ್ ವಾಹನದಲ್ಲಿ ಹೊರಟಿದ್ದು, ಈ ಪೈಕಿ ಎಂಟು ಮಂದಿ ಬಾರದ ಲೋಕಕ್ಕೆ ತೆರಳಿದ್ದಾರೆ. ಚಾಲಕ ಕೃಷ್ಣಪ್ಪ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಈಗ ನೀಡಿದ ಹೇಳಿಕೆ ಪ್ರಕಾರ ಟೀ ಕುಡಿಯುವ ನೆಪದಲ್ಲಿ ಕೆಳಗಿಳಿದಿದ್ದ ಚಾಲಕ ಕೃಷ್ಣಪ್ಪ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಈ ಅಂಶವೇ ಅಪಘಾತಕ್ಕೆ ಕಾರಣವೆನ್ನಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ನಿಖರ ಕಾರಣ ತಿಳಿದು ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...