alex Certify ಅತ್ಯುತ್ಸಾಹದ ಭರದಲ್ಲಿ ಮಹಾ ಎಡವಟ್ಟು; ಬದುಕಿರುವ ಯೋಧನ ಮನೆಗೆ ತೆರಳಿ ಸಾಂತ್ವನ ಹೇಳಿದ ಕೇಂದ್ರ ಸಚಿವ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯುತ್ಸಾಹದ ಭರದಲ್ಲಿ ಮಹಾ ಎಡವಟ್ಟು; ಬದುಕಿರುವ ಯೋಧನ ಮನೆಗೆ ತೆರಳಿ ಸಾಂತ್ವನ ಹೇಳಿದ ಕೇಂದ್ರ ಸಚಿವ…!

ಗದಗ: ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ರಾಜ್ಯದ ನಾಲ್ವರು ಸಂಸದರು ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಉತ್ಸಾಹದಲ್ಲಿ ಜನಾಶಿರ್ವಾದ ಯಾತ್ರೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಕೇಂದ್ರ ಸಚಿವ ನಾರಾಯಣಸ್ವಾಮಿ ಎಡವಟ್ಟೊಂದನ್ನು ಮಾಡಿದ್ದಾರೆ.

ಗದಗದಲ್ಲಿ ಮೃತ ಯೋಧನ ಮನೆಗೆ ತೆರಳಿ ಸಾಂತ್ವನ ಹೇಳಬೇಕಿದ್ದ ಸಚಿವ ನಾರಾಯಣಸ್ವಾಮಿ, ಜಮ್ಮು-ಕಾಶ್ಮೀರದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹಾಲಿ ಯೋಧನ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಪತ್ನಿ, ಐದು ಮಕ್ಕಳನ್ನು ಹೊಂದಿದ್ರೂ 2ನೇ ಮದುವೆಗೆ ಸಿದ್ಧನಾದ ಆಟಗಾರ

ಮಾಹಿತಿ ಕೊರತೆಯಿಂದ ಈ ಎಡವಟ್ಟು ನಡೆದಿದೆ ಎನ್ನಲಾಗಿದೆ. ಒಂದೂವರೆ ವರ್ಷದ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿ ಗದಗದ ಮುಳಗುಂದ ಪಟ್ಟಣದ ಯೋಧ ಬಸವರಾಜ ಕರ್ತವ್ಯ ನಿರ್ವಹಿಸುವ ವೇಳೆ ರೈಲು ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು.

ಬಸವರಾಜ್ ಮನೆಗೆ ತೆರಳಿ ಸಾಂತ್ವನ ಹೇಳಬೇಕಿದ್ದ ಕೇಂದ್ರ ಸಚಿವರು ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ರವಿಕುಮಾರ್ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಸಾಲದ್ದಕ್ಕೆ ರವಿಕುಮಾರ್ ಪತ್ನಿಗೆ ಸರ್ಕಾರಿ ನೌಕರಿ, ಜಮೀನು ನೀಡುವ ಭರವಸೆಗಳನ್ನೂ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...