alex Certify ಅಡುಗೆ ಸಿದ್ಧವಾಗದ್ದಕ್ಕೆ ಪತ್ನಿಯನ್ನು ಹೊಡೆದು ಬಾವಿಗೆಸೆದ ಪಾಪಿ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಸಿದ್ಧವಾಗದ್ದಕ್ಕೆ ಪತ್ನಿಯನ್ನು ಹೊಡೆದು ಬಾವಿಗೆಸೆದ ಪಾಪಿ ಪತಿ

ಪತಿಯೊಬ್ಬನ ಕ್ರೌರ್ಯಕ್ಕೆ ಮಡದಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಲಾಂಡ್ರಿ ಬ್ಯಾಟ್‌ನಿಂದ ಥಳಿಸಿ, ಅವಳು ಅಡುಗೆ ಮಾಡುವವರೆಗೆ ಕಾಯುವಂತೆ ಹೇಳಿ ನಂತರ ಆಕೆಯನ್ನು ಬಾವಿಗೆ ಎಸೆದು ಸಾಯಿಸಿದ್ದಾನೆ.

ಮಧ್ಯಪ್ರದೇಶದ ದೇವಾಸ್‌ನ ಹತ್ಪಿಪ್ಲಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಳಿಕ ಮಹಿಳೆಯ ಶವವನ್ನು ಬಾವಿಯಿಂದ ಹೊರತೆಗೆಯಲಾಗಿದೆ. ಆರೋಪಿ ಗಂಡನನ್ನು ದಿನೇಶ್ ಎಂದು ಗುರುತಿಸಲಾಗಿದ್ದು, ಈತ ತಿಳ್ಯಖೇಡಿಯಲ್ಲಿ ವಾಸಿಸುತ್ತಿದ್ದಾನೆ.

ಮಂಗಳವಾರ ಸಂಜೆ ಆರೋಪಿ ದಿನೇಶ್ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಇನ್ನೂ ಆಹಾರ ತಯಾರಾಗದ್ದಕ್ಕೆ ಸಿಟ್ಟಿಗೆದ್ದಿದ್ದಾನೆ. ಈ ಬಗ್ಗೆ ತನ್ನ ಹೆಂಡತಿಯನ್ನು ಆತ ಪ್ರಶ್ನಿಸಿದ್ದಾನೆ. ತಾನು ಬೇರೆ ಕೆಲಸದಲ್ಲಿ ನಿರತಳಾಗಿದ್ದರಿಂದ ಅಡುಗೆ ಮಾಡಲಾಗಲಿಲ್ಲ. ಸ್ವಲ್ಪ ಸಮಯ ಕಾಯುವಂತೆ ಕೇಳಿಕೊಂಡಿದ್ದಾಳೆ. ಇದನ್ನು ಕೇಳಿದ ದಿನೇಶ ಕೋಪಗೊಂಡು ಅವಳನ್ನು ಬೈಯಲು ಪ್ರಾರಂಭಿಸಿದ್ದಾನೆ. ನಂತರ ಲಾಂಡ್ರಿ ಬ್ಯಾಟ್‌ನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಈ ವೇಳೆ ಪುತ್ರಿ ಮಧ್ಯಪ್ರವೇಶಿಸಿದಾಗ ಆಕೆಗೂ ಹೊಡೆದಿದ್ದಾನೆ. ನಂತರ ತನ್ನ ಪತ್ನಿಯನ್ನು ಬಾವಿಗೆ ಎಸೆದು ಹೊರಟು ಹೋಗಿದ್ದಾನೆ.

ಘಟನೆಯ ಬಗ್ಗೆ ಪುತ್ರಿ ನಿಕಿತಾ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಿ, ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ.

ಐಪಿಸಿ ಸೆಕ್ಷನ್ 302, 294, 323, ಮತ್ತು 201 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...