alex Certify ʼಸರಿಗಮಪʼ ವೇದಿಕೆಯಲ್ಲಿ ಹಾಡು ಹಾಡಿದ ಸ್ಪಿನ್ ಮಾಂತ್ರಿಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸರಿಗಮಪʼ ವೇದಿಕೆಯಲ್ಲಿ ಹಾಡು ಹಾಡಿದ ಸ್ಪಿನ್ ಮಾಂತ್ರಿಕ..!

ಕಳೆದ ಐಪಿಎಲ್ ನ ಎರಡನೇ ಸೀಸನ್ ಸಂದರ್ಭದಲ್ಲಿ ದುಬೈನಲ್ಲಿ ಪಂಜಾಬ್ ಹುಡುಗರಿಗಾಗಿ ಆಯೋಜಿಸಿದ್ದ ಸಂಜೆಯ ಪಾರ್ಟಿಯಲ್ಲಿ ಕನ್ನಡ ಹಾಡು ಹಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದ ಭಾರತದ ಸ್ಪಿನ್ ಮಾಂತ್ರಿಕ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಈಗ ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಸರಿಗಮ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಹಾಡು ಹೇಳಿದ್ದಾರೆ.

ಈ ಕುರಿತ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಅಭಿಮಾನಿಗಳು ಈ ಕಾರ್ಯಕ್ರಮ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಅಂದು ದುಬೈನಲ್ಲಿ ಹಾಡಿದ್ದ ದೇವರ ಗುಡಿ ಚಿತ್ರದ ಮಾಮರವೆಲ್ಲೋ….ಕೋಗಿಲೆ ಎಲ್ಲೋ… ಹಾಡನ್ನೇ ಅನಿಲ್ ಕುಂಬ್ಳೆ ಸರಿಗಮಪ ವೇದಿಕೆಯಲ್ಲಿ ಹಾಡಿದ್ದಾರೆ.

ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿಯ ರಿವಾಲ್ವಾರ್ ಮಿಸ್ಸಿಂಗ್…!

ಈ ಕಾರ್ಯಕ್ರಮವು ಜೀ ಕನ್ನಡದಲ್ಲಿ ಇದೇ ಶನಿವಾರ ಹಾಗೂ ಭಾನುವಾರದಂದು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಅಲ್ಲದೇ, ಅನಿಲ್ ಕುಂಬ್ಳೆ ಅವರ ಅಭಿಮಾನಿಯಾಗಿರುವ ನಟ ಕಿಚ್ಚ ಸುದೀಪ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ನಾನು ಕೀಪಿಂಗ್ ಮಾಡಬೇಕು, ಕುಂಬ್ಳೆ ಅವರು ಬೌಲಿಂಗ್ ಮಾಡಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿರುವ ಅನಿಲ್ ಕುಂಬ್ಳೆ, ಪ್ರೇಮಲೋಕದ ಅಬ್ಬರ ಶುರುವಾದಾಗ ನಮ್ಮ ಕ್ರಿಕೆಟ್ ಲೋಕದ ಪಯಣ ಆರಂಭವಾಗಿತ್ತು ಎಂದು ಹೇಳಿದ್ದಾರೆ. ಇದರಿಂದ ಆಶ್ಚರ್ಯಕ್ಕೊಳಗಾದ ಸಂಗೀತ ದಿಗ್ಗಜ ಹಂಸಲೇಖ ಅವರು, ನೀವು ಕಣಕ್ಕೆ ಇಳಿದರೆ ವಿಕೆಟ್ಟು, ಮನಸ್ಸಿಗೆ ಇಳಿದರೆ ಕಮಿಟ್ಟು ಎಂದು ಹೇಳಿದ್ದಾರೆ. ಈ ಕುರಿತು ಪ್ರೋಮೋದಲ್ಲಿ ಕಂಡು ಬಂದಿದ್ದು, ಕನ್ನಡಿಗರು ಮಾತ್ರ ಭಾನುವಾರಕ್ಕಾಗಿ ಕಾಯುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...