alex Certify ʼಈರುಳ್ಳಿ ಸಿಪ್ಪೆ’ ಎಸೆಯುವ ಮುನ್ನ ಇದನ್ನು ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಈರುಳ್ಳಿ ಸಿಪ್ಪೆ’ ಎಸೆಯುವ ಮುನ್ನ ಇದನ್ನು ಓದಿ

ಈರುಳ್ಳಿ, ಅಡುಗೆಗೆ ರುಚಿ ಕೊಡುವ ಜೊತೆ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸಿಪ್ಪೆಯಿಂದಲೂ ಗಂಟಲಿನ ಸೋಂಕನ್ನು ನಿವಾರಣೆ ಮಾಡಬಹುದು ಎಂಬುದು ನಿಮಗೆ ಗೊತ್ತೇ…?

ಈರುಳ್ಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಹತ್ತು ನಿಮಿಷ ಬಿಡಿ. ಬಳಿಕ ಅದೇ ನೀರಿನಿಂದ ಬಾಯಿ ಮುಕ್ಕಳಿಸಿ. ಅಥವಾ ಆ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ ಇದರಿಂದ ಗಂಟಲಿನ ಸೋಂಕು ಕಡಿಮೆಯಾಗುತ್ತದೆ.

ಕಾಲುಗಳಲ್ಲಿ ಸೆಳೆತ, ನೋವು ಆಗುತ್ತಿದ್ದರೆ ನೀವು ಈರುಳ್ಳಿ ಸಿಪ್ಪೆಯನ್ನು ಈ ರೀತಿಯಲ್ಲಿ ಬಳಸಿಕೊಳ್ಳಬಹುದು. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಸಿಪ್ಪೆ ಹಾಕಿ. ಈ ನೀರನ್ನು ಹತ್ತರಿಂದ ಹದಿನೈದು ನಿಮಿಷ ಚೆನ್ನಾಗಿ ಕುದಿಸಿ ಇದರಲ್ಲಿ ಕಾಲು ಇಟ್ಟುಕೊಳ್ಳಿ.

ಈರುಳ್ಳಿ ಸಿಪ್ಪೆಗಳು ಗಿಡಗಳ ಬೆಳವಣಿಗೆಯಲ್ಲಿ ಫರ್ಟಿಲೈಸರ್ ಆಗಿ ಕೆಲಸ ಮಾಡುತ್ತವೆ. ಈರುಳ್ಳಿ ಸಿಪ್ಪೆ ನೆನೆಸಿಟ್ಟ ನೀರನ್ನು ಒಂದು ದಿನದ ಬಳಿಕ ಗಿಡದ ಬುಡಕ್ಕೆ ಸುರಿಯಿರಿ. ವಾರದಲ್ಲಿ ಒಂದು ಬಾರಿ ಈ ರೀತಿ ಮಾಡಿ. ಇದರಿಂದ ಗಿಡಗಳಿಗೆ ಫರ್ಟಿಲೈಜರ್ ದೊರೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...