alex Certify BIG NEWS: ಆಧಾರ್ ‘ದುರುಪಯೋಗ’ ಸಲಹೆ ಹಿಂತೆಗೆದುಕೊಂಡ ಕೇಂದ್ರ: ಸಾಮಾನ್ಯ ವಿವೇಕ ಬಳಕೆಗೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಧಾರ್ ‘ದುರುಪಯೋಗ’ ಸಲಹೆ ಹಿಂತೆಗೆದುಕೊಂಡ ಕೇಂದ್ರ: ಸಾಮಾನ್ಯ ವಿವೇಕ ಬಳಕೆಗೆ ಸಲಹೆ

ನವದೆಹಲಿ: ದುರುಪಯೋಗವನ್ನು ತಡೆಗಟ್ಟಲು ಯಾವುದೇ ಸಂಸ್ಥೆಗೆ ತಮ್ಮ ಆಧಾರ್‌ ಫೋಟೊಕಾಪಿಗಳನ್ನು ಹಂಚಿಕೊಳ್ಳಬಾರದು ಎಂದು ನಾಗರಿಕರಿಗೆ ಸೂಚಿಸಿದ್ದ ಸಲಹೆಯನ್ನು ಸರ್ಕಾರ ಹಿಂಪಡೆದಿದೆ.

ಭಾನುವಾರ ನೀಡಿದ ಹೇಳಿಕೆಯಲ್ಲಿ, ಸರ್ಕಾರವು ಯುಐಡಿಎಐನ ಹಿಂದಿನ ಪತ್ರಿಕಾ ಪ್ರಕಟಣೆಯನ್ನು ಹಿಂತೆಗೆದುಕೊಂಡಿದೆ,

ಯುಐಡಿಎಐ ನೀಡಿದ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಯುಐಡಿಎಐ ಆಧಾರ್ ಸಂಖ್ಯೆಗಳನ್ನು ಬಳಸುವಲ್ಲಿ ಮತ್ತು ಹಂಚಿಕೊಳ್ಳುವಲ್ಲಿ ಸಾಮಾನ್ಯ ವಿವೇಕವನ್ನು ಬಳಸಲು ಮಾತ್ರ ಸಲಹೆ ನೀಡಲಾಗುತ್ತದೆ ಎಂದು ಕೇಂದ್ರ ಹೇಳಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹಿಂದಿನ ಹೇಳಿಕೆಯಲ್ಲಿ, ದುರ್ಬಳಕೆ ತಡೆಯಲು ನಾಗರಿಕರು ತಮ್ಮ ಆಧಾರ್ ಕಾರ್ಡ್‌ಗಳ ಮಾಸ್ಕ್ ಪ್ರತಿಗಳನ್ನು ಮಾತ್ರ ಹಂಚಿಕೊಳ್ಳಬೇಕು ಎಂದು ಸೂಚಿಸಿತ್ತು. ನಿಮ್ಮ ಆಧಾರ್‌ ಫೋಟೋಕಾಪಿಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಅದು ದುರುಪಯೋಗವಾಗಬಹುದು. ಪರ್ಯಾಯವಾಗಿ, ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ಪ್ರದರ್ಶಿಸುವ ಮಾಸ್ಕ್ ಆಧಾರ್ ಬಳಸಿ ಎಂದು ಹೇಳಲಾಗಿತ್ತು.

ತಪ್ಪಾದ ವ್ಯಾಖ್ಯಾನದ ಸಾಧ್ಯತೆಯ ಕುರಿತು ಯುಐಡಿಎಐ ಪತ್ರಿಕಾ ಪ್ರಕಟಣೆಯನ್ನು ಸರ್ಕಾರ ಹಿಂಪಡೆದಿದೆ. ತಮ್ಮ ಆಧಾರ್ ಸಂಖ್ಯೆಯನ್ನು ಬಳಸುವಲ್ಲಿ ಮತ್ತು ಹಂಚಿಕೊಳ್ಳುವಲ್ಲಿ ಸಾಮಾನ್ಯ ವಿವೇಕವನ್ನು ಬಳಸಬೇಕು ಎಂದು UIDAI ಜನರಿಗೆ ಸಲಹೆ ನೀಡಿದೆ ಎಂದು ಸರ್ಕಾರ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...