alex Certify ದೀಪಾವಳಿಗೆ ತಯಾರಾಯ್ತು ಬಿದಿರಿನ ಹಣತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿಗೆ ತಯಾರಾಯ್ತು ಬಿದಿರಿನ ಹಣತೆ..!

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಅನೇಕ ಪರಿಸರ ಸ್ನೇಹಿ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ತ್ರಿಪುರದಲ್ಲಿ ಬಿದಿರಿನ ದೀಪಗಳು ತಯಾರಾಗುತ್ತಿವೆ.

ಸೆಪಾಹಿಜಾಲಾ ಜಿಲ್ಲೆಯ ಮಹಿಳಾ ಸ್ವ ಸ್ವಹಾಯ ಸಂಘ ಈ ಪರಿಸರ ಸ್ನೇಹಿ ಹಣತೆಗಳನ್ನ ತಯಾರಿಸುತ್ತಿವೆ. ಈ ದೀಪಗಳನ್ನ ತ್ರಿಪುರ ಸಿಎಂ ಬಿಪ್ಲಬ್​ ಕುಮಾರ್​ ದೇಬ್​​ ಲೋಕಾರ್ಪಣೆ ಮಾಡಿದ್ದಾರೆ. ಪ್ರಧಾನಿ ಮೋದಿ ಕರೆ ನೀಡಿದ ವೋಕಲ್​ ಫಾರ್ ಲೋಕಲ್​ ಅಭಿಯಾನಕ್ಕೆ ಈ ಹಣತೆಗಳು ಮತ್ತೊಂದು ಸೇರ್ಪಡೆಯಾಗಿವೆ.

ಬಿದಿರಿನ ಮೂಲಕ ತಯಾರಾದ ಬಾಟಲಿಗಳು, ಅಕ್ಕಿ ಸೇರಿದಂತೆ ಅನೇಕ ವಸ್ತುಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಇದೀಗ ಈ ಸಾಲಿಗೆ ಹಣತೆ ಕೂಡ ಸೇರಿದೆ.

ಈ ವಿಚಾರವಾಗಿ ಮಾತನಾಡಿದ ಸಿಎಂ ದೇಬ್​, ಪ್ರಧಾನಿ ಮೋದಿ ತಮ್ಮ ಮನ್​ ಕಿ ಬಾತ್​ನಲ್ಲಿ ಬಿದಿರಿನ ಬಳಕೆ ಬಗ್ಗೆ ಸಲಹೆ ನೀಡಿದ್ದರು. ಇದರಿಂದ ಸ್ಪೂರ್ತಿ ಪಡೆದ ಮಹಿಳೆಯರು ಈ ವಿಶಿಷ್ಟ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗ್ತಿದ್ದಾರೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...