alex Certify ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ರದ್ದಾದ ಟಿಕೆಟ್ ಹಣ ಸಂಪೂರ್ಣ ಮರುಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ರದ್ದಾದ ಟಿಕೆಟ್ ಹಣ ಸಂಪೂರ್ಣ ಮರುಪಾವತಿ

ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ರೈಲು ಸಂಚಾರ ರದ್ದಾಗಿತ್ತು. ಹೀಗಾಗಿ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಇದೀಗ ರೈಲ್ವೆ ಇಲಾಖೆ ಈ ಟಿಕೆಟ್ ಗಳ ಹಣ ಮರು ಪಾವತಿ ಕುರಿತು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

ಮಾರ್ಚ್ 21, 2020 ರಿಂದ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿದವರಿಗೆ ಸಂಪೂರ್ಣ ಹಣ ಮರು ಪಾವತಿ ಮಾಡಲು ರೈಲ್ವೆ ಇಲಾಖೆ ಮುಂದಾಗಿದ್ದು, ಇಂತಹ ಟಿಕೆಟ್ ಹೊಂದಿದವರು ರೀ ಫಂಡ್ ಗಾಗಿ ಪ್ರಯಾಣದ ಅವಧಿಯ ದಿನಾಂಕದಿಂದ 6 ತಿಂಗಳವರೆಗೆ ಟಿಕೆಟ್ ಕೌಂಟರ್ ನಲ್ಲಿ ಸಲ್ಲಿಸಿ ಹಣ ಹಿಂಪಡೆಯಬಹುದಾಗಿದೆ.

ಆನ್ಲೈನ್ ಮೂಲಕ ಟಿಕೆಟ್ ಪಡೆದುಕೊಂಡವರಿಗೆ ಅವರ ಖಾತೆಗೆ ಸಂಪೂರ್ಣ ಹಣ ಜಮಾ ಆಗುತ್ತಿದ್ದು, ಕ್ಯಾನ್ಸಲೇಶನ್ ಚಾರ್ಜ್ ಸಹ ಪ್ರಯಾಣಿಕರ ಖಾತೆಗೆ ಜಮಾ ಮಾಡಲಾಗುತ್ತದೆ. ಕ್ಯಾನ್ಸಲೇಶನ್ ಚಾರ್ಜ್ ಹಣ ಮರು ಪಾವತಿ ಮಾಡುವ ಸಲುವಾಗಿ ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ.

ಒಂದೊಮ್ಮೆ ಟ್ರೈನ್ ರದ್ದಾಗಿದ್ದರೂ ಪ್ರಯಾಣಿಸಲು ಸಾಧ್ಯವಾಗದಿದ್ದರೆ ಅಂತಹ ಸಂದರ್ಭದಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಪೂರ್ಣ ಹಣವನ್ನು ಮರು ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...