ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಯಲ್ಲಿದ್ದು ಈ ಸಮಯದಲ್ಲಿ ಮೋದಿ ಸರ್ಕಾರ ಜನ ಧನ್ ಖಾತೆಗೆ ಹಣವನ್ನು ವರ್ಗಾಯಿಸುತ್ತಿದೆ. ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಖಾತೆ ತೆರೆದ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಪಿಎಂ ಜನ ಧನ್ ಯೋಜನೆ 2020 ರ ಅಡಿಯಲ್ಲಿ ಖಾತೆ ತೆರೆದವರಿಗೆ 1 ಲಕ್ಷ ರೂಪಾಯಿವರೆಗೆ ಉಚಿತ ಅಪಘಾತ ವಿಮೆ ಲಭ್ಯವಿದೆ.
30 ಸಾವಿರ ರೂಪಾಯಿಗಳ ಜೀವ ವಿಮೆ ಸಹ ಸಿಗಲಿದೆ. ಫಲಾನುಭವಿಯ ಸಾವಿನ ನಂತ್ರ ಇದನ್ನು ಪಾವತಿಸಲಾಗುತ್ತದೆ. ಆದಾಗ್ಯೂ ಅರ್ಹತಾ ಷರತ್ತುಗಳನ್ನು ಪೂರೈಸುವುದು ಅವಶ್ಯಕ. ಈ ವಿಮೆ ರುಪೇ ಡೆಬಿಟ್ ಕಾರ್ಡ್ನಲ್ಲಿ ಲಭ್ಯವಿದೆ. ರುಪೇ ಕಾರ್ಡ್ ದಾರ ಯಾವುದೇ ಬ್ಯಾಂಕ್ ಖಾತೆ, ಬ್ಯಾಂಕ್ ಮಿತ್ರ, ಎಟಿಎಂ, ಪಿಒಎಸ್, ಇ-ಕಾಮ್ ಸೇರಿದಂತೆ ಯಾವುದೇ ಚಾನೆಲ್ ನಲ್ಲಿ ಯಶಸ್ವಿ ಹಣಕಾಸು ಅಥವಾ ಹಣಕಾಸೇತರ ವಹಿವಾಟನ್ನು ಹೊಂದಿದ್ದರೆ ಅಪಘಾತದ ವಿಮೆ ಲಭ್ಯವಾಗಲಿದೆ.
ಜನ್ ಧನ್ ಖಾತೆಯಲ್ಲಿ ಕನಿಷ್ಠ ಹಣ ಉಳಿಸಿಕೊಳ್ಳುವ ಮಿತಿಯಿಲ್ಲ. 10,000 ರೂಪಾಯಿಗಳವರೆಗೆ ಓವರ್ ಡ್ರಾಫ್ಟ್ ಸೌಲಭ್ಯವು ಪ್ರತಿ ಕುಟುಂಬದ ಕೇವಲ ಒಂದು ಖಾತೆಗೆ ಮಾತ್ರ ಲಭ್ಯವಿದೆ. ಯಾವುದೇ ಬ್ಯಾಂಕ್ ಶಾಖೆ ಅಥವಾ ಬ್ಯಾಂಕ್ ಸ್ನೇಹಿತರ ಮೂಲಕ ಈ ಖಾತೆಯನ್ನು ತೆರೆಯಬಹುದು. ಜನ್ ಧನ್ ಖಾತೆ ತೆರೆಯಲು, ಆಧಾರ್ ಕಾರ್ಡ್, ಪಾಸ್ಪೋರ್ಟ್, ಚಾಲನಾ ಪರವಾನಗಿ ಸೇರಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಬೇಕು.