alex Certify ‌ʼಪಿಎಂ ಕಿಸಾನ್​ ಸಮ್ಮಾನ್​ʼ ನಿಧಿಯಿಂದ ಡಬಲ್​ ಲಾಭ ಪಡೆಯಬೇಕು ಅಂತಿದ್ರೆ ಈ ಕೆಲಸ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಪಿಎಂ ಕಿಸಾನ್​ ಸಮ್ಮಾನ್​ʼ ನಿಧಿಯಿಂದ ಡಬಲ್​ ಲಾಭ ಪಡೆಯಬೇಕು ಅಂತಿದ್ರೆ ಈ ಕೆಲಸ ಮಾಡಿ

ನೀವು ಒಬ್ಬ ರೈತರಾಗಿದ್ದು ಇಲ್ಲಿಯವರೆಗೆ ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಗೆ ನಿಮ್ಮನ್ನ ನೋಂದಾಯಿಸಿಕೊಳ್ಳದಿದ್ದರೆ ನೀವು ಈ ಮಹತ್ವದ ಸುದ್ದಿಯನ್ನ ಓದಲೇಬೇಕು.

ರೈತರಿಗೆಂದೇ ಕೇಂದ್ರ ಸರ್ಕಾರ ರೂಪಿಸಿರುವ ಈ ಯೋಜನೆಯ ಲಾಭವನ್ನ ಪಡೆಯಬೇಕು ಅಂತಿದ್ದರೆ ನೀವು ಮಾರ್ಚ್​ 31ರೊಳಗಾಗಿ ನಿಮ್ಮನ್ನ ನೀವು ನೋಂದಾಯಿಸಿಕೊಳ್ಳಬೇಕು.

ಮಾರ್ಚ್ 31ರ ಒಳಗಾಗಿ ನೀವು ಸಲ್ಲಿಸಿದ ಅರ್ಜಿಯನ್ನ ಸ್ವೀಕಾರ ಮಾಡಿದ್ರು ಅಂದರೆ ಮಾರ್ಚ್ ತಿಂಗಳ 2 ಸಾವಿರ ರೂಪಾಯಿ ಹಣ ಕೂಡ ನಿಮ್ಮ ಖಾತೆಗೆ ಬಂದು ಬೀಳಲಿದೆ. ಇದರ ಜೊತೆಯಲ್ಲಿ ಏಪ್ರಿಲ್​ ತಿಂಗಳ 2000 ಸಾವಿರ ರೂಪಾಯಿ ಹಣ ಕೂಡ ನಿಮ್ಮ ಖಾತೆಯಲ್ಲಿ ಜಮೆ ಆಗಲಿದೆ. ಈ ರೀತಿಯಾಗಿ ನೀವು ಡಬಲ್​ ಲಾಭ ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಗೆ ನೋಂದಾಯಿಸಿಕೊಳ್ಳಲು ಈ ಹಂತವನ್ನ ಅನುಸರಿಸಿ :

ಅಧಿಕೃತ ವೆಬ್​ಸೈಟ್​ https://pmkisan.gov.in/ ಗೆ ಲಾಗಿನ್​ ಆಗಿ

ಇಲ್ಲಿ ನ್ಯೂ ರಿಜಿಸ್ಟ್ರೇಷನ್​ ಲಿಂಕ್​ ಮೇಲೆ ಕ್ಲಿಕ್​ ಮಾಡಬೇಕು. ಈಗ ಹೊಸ ಪೇಜ್​ ತೆರೆದುಕೊಳ್ಳಲಿದೆ

ಇಲ್ಲಿ ನಿಮ್ಮ ಆಧಾರ್​ ಸಂಖ್ಯೆಯನ್ನ ನಮೂದಿಸಿ ಇದಾದ ಬಳಿಕ ರಿಜಿಸ್ಟ್ರೇಷನ್​ ಪೇಜ್​ ತೆರೆದುಕೊಳ್ಳಲಿದೆ

ರಿಜಿಸ್ಟ್ರೇಷನ್​ ಅರ್ಜಿಯಲ್ಲಿ ನಿಮಗೆ ಕೇಳಲಾಗುವ ಮಾಹಿತಿಗಳನ್ನ ನಮೂದಿಸಬೇಕು

ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್​ ಇಲ್ಲವೇ ಗ್ರಾಮದ ಬಗ್ಗೆ ಮಾಹಿತಿಯನ್ನ ನೀಡಬೇಕು

ಬ್ಯಾಂಕ್​ ಖಾತೆ ಹಾಗೂ ಆಧಾರ್​ ಕಾರ್ಡ್ ಮಾಹಿತಿಯನ್ನ ಲಗತ್ತಿಸಿ

ಎಲ್ಲಾ ಮಾಹಿತಿಗಳನ್ನ ನೀಡಿದ ಬಳಿಕ ಸೇವ್​ ಮಾಡಿ

ನಿಮ್ಮ ಅರ್ಜಿಯ ಬಗ್ಗೆ ಅಪ್​ಡೇಟ್​​ ಪಡೆದುಕೊಳ್ಳಲು ಮನೆಯಲ್ಲೇ ಕೂತು ನೀವು ರಿಜಿಸ್ಟರ್​ ಮೊಬೈಲ್​ ನಂಬರ್​ನಿಂದ ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಿ.

ಈ ಯೋಜನೆಗಾಗಿ ನೋಂದಾವಣಿ ಮಾಡಿಕೊಳ್ಳೋದು ತುಂಬಾನೇ ಸುಲಭ. ಮನೆಯಲ್ಲೇ ಕೂತು ಆನ್​​ಲೈನ್​ನಲ್ಲೇ ನೀವು ಈ ಎಲ್ಲಾ ಪ್ರಕ್ರಿಯೆಗಳನ್ನ ಪೂರೈಸಬಹುದಾಗಿದೆ. ಇಲ್ಲವಾದಲ್ಲಿ ಹತ್ತಿರದ ಪಂಚಾಯತ್​ಗೆ ಭೇಟಿ ನೀಡಿ ಕೂಡ ಈ ಕಾರ್ಯವನ್ನ ಮಾಡಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...