alex Certify ರೈತರಿಗೆ ಗುಡ್ ನ್ಯೂಸ್: ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಹೊಸಪೇಟೆ: 2022-23ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ವಿಜಯನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಸದರಿ ಯೋಜನೆಯಡಿ ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಜೋಳ(ನೀ), ಕಡಲೆ (ನೀ/ಮ.ಆ), ರಾಗಿ(ನೀ) ಹಾಗೂ ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ನೆಲಗಡಲೆ(ಶೇಂಗಾ)(ನೀ), ಭತ್ತ(ನೀ), ಸೂರ್ಯಕಾಂತಿ(ನೀ) ಹಾಗೂ ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ಬೆಳೆಗಳಾದ ಕಡಲೆ(ನೀ/ಮ.ಆ), ಜೋಳ(ನೀ/ಮ.ಆ), ಮೆಕ್ಕೆಜೋಳ(ನೀ/ಮ.ಆ) ಹುರುಳಿ(ಮ.ಆ), ಸೂರ್ಯಕಾಂತಿ(ನೀ/ಮ.ಆ), ರಾಗಿ(ನೀ), ಈರುಳ್ಳಿ(ನೀ), ಗೋಧಿ(ಮ.ಆ) ಮತ್ತು ಬೇಸಿಗೆ ಹಂಗಾಮಿನ ಸೂರ್ಯಕಾಂತಿ(ನೀ), ಈರುಳ್ಳಿ(ನೀ)ನೆಲಗಡಲೆ(ಶೇಂಗಾ)(ನೀ), ಭತ್ತ(ನೀ), ರಾಗಿ(ನೀ) ಬೆಳೆಗಳಿಗೆ ವಿಮೆ ಮಾಡಿಸಬಹುದು.

ಹಿಂಗಾರು ಹಂಗಾಮಿನ ಬೆಳೆಗಳಾದ-ಜೋಳ(ನೀ) ಡಿ.31, ಜೋಳ (ಮ) ಡಿ.15, ಮುಸುಕಿನ ಜೋಳ(ನೀ/ಮ.ಆ), ಕಡಲೆ(ನೀ/ಮ)ಡಿ.31, ಹುರುಳಿ(ಮ)ಡಿ.31, ಸೂರ್ಯಕಾಂತಿ(ನೀ/ಮ.ಆ) ಡಿ.16, ಗೋಧಿ(ಮ.ಆ/ನೀ) ಡಿ.16, ಈರುಳ್ಳಿ(ನೀ) ನ.30, ಬೇಸಿಗೆ ಬೆಳೆಗಳಾದ ಭತ್ತ(ನೀ), ನೆಲಗಡಲೆ(ಶೇಂಗಾ)(ನೀ) ಸೂರ್ಯಕಾಂತಿ(ನೀ) ಮತ್ತು ಈರುಳ್ಳಿ(ನೀ) 2023ನೇ ಫೆ.28 ರಂದು ಬೆಳೆ ವಿಮೆ ಮಾಡಿಸಲು ಕೊನೆಯದಿನವಾಗಿರುತ್ತದೆ.

ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‍ಗಳು/ಸಾರ್ವಜನಿಕ ಸೇವಾ ಕೇಂದ್ರಗಳನ್ನು(Common Service Centers) ಸಿ.ಎಸ್.ಸಿ ಟೋಲ್ ಫ್ರೀ ನಂಬರ್: 08026-564535, ಟೋಲ್ ಫ್ರೀ ನಂಬರ್: 180042579, ಈಉI  ವಿಮಾ ಕಂಪನಿ ಟೋಲ್ ಫ್ರೀ ನಂಬರ್: 18002664141 ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಸಂರಕ್ಷಣೆ ಪೋರ್ಟಲ್ https://www.samrakshane.karnataka.gov.in ಸಂಪರ್ಕಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...