ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಆರ್ಥಿಕತೆ ಸುಧಾರಿಸಲು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಮಾಹಿತಿ ನೀಡ್ತಿದ್ದಾರೆ.
ಬುಧವಾರ ಹಾಗೂ ಗುರುವಾರ ಸಚಿವೆ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡಿದ್ದಾರೆ. ಇಂದು ಮತ್ತೊಂದಿಷ್ಟು ಯೋಜನೆಗಳ ಜೊತೆ ಎಲ್ಲರ ಮುಂದೆ ಬರಲಿದ್ದಾರೆ.
ಹಣಕಾಸಿನ ಉತ್ತೇಜನ ಪ್ಯಾಕೇಜಿನ ಮೂರನೇ ಕಂತಿನಲ್ಲಿ ವಲಯ ರಿಯಾಯಿತಿಗಳ ಬಗ್ಗೆ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಗಮನ ಹರಿಸಲಿದೆ. ಇದರ ಅಡಿಯಲ್ಲಿ ವಿವಿಧ ಕ್ಷೇತ್ರಗಳಿಗೆ ರಿಯಾಯಿತಿಗಳನ್ನು ಘೋಷಿಸಲಾಗುವುದು. ಮೀನುಗಾರಿಕೆ ಉದ್ಯಮಕ್ಕಾಗಿ ಕೇಂದ್ರ ಸರ್ಕಾರ ಶುಕ್ರವಾರ ವಿಶೇಷ ಘೋಷಣೆ ಮಾಡಬಹುದು.
ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ ಘೋಷಣೆ ಮಾಡುವ ಸಾಧ್ಯತೆಯಿದೆ. ಸಾಗರ ಹಾಗೂ ಒಳನಾಡಿನ ಮೀನುಗಾರಿಕೆ, ಅಕ್ವಾಕ್ಲರ್ಗಳಿಗೆ ಸಬ್ಸಿಡಿ ಮತ್ತು ಬಂಡವಾಳವನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ. ಇದಕ್ಕಾಗಿ ಅಗ್ಗದ ದರದಲ್ಲಿ ಸಾಲವನ್ನು ಒದಗಿಸುವುದಾಗಿಯೂ ಘೋಷಿಸಲಿದೆ.
ಮೂಲಸೌಕರ್ಯ ಕ್ಷೇತ್ರದ ಬಗ್ಗೆ ಕೆಲವು ದೊಡ್ಡ ಪ್ರಕಟಣೆಗಳನ್ನು ಸಹ ಮಾಡಬಹುದು. ಇದರಲ್ಲಿ ವಿವಿಧ ಪ್ರದೇಶಗಳಿಗೆ ಹಣವನ್ನು ಹಂಚಿಕೆ ಮಾಡಬಹುದು. ವಿದೇಶಿ ಹೂಡಿಕೆಯ ನಿಯಮಗಳಲ್ಲಿಯೂ ವಿನಾಯಿತಿ ಘೋಷಿಸುವ ಸಾಧ್ಯತೆಯಿದೆ.