alex Certify BIG BREAKING: ಬೆಲೆ ಇಳಿಕೆಗೆ ಸರ್ಕಾರದಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷದವರೆಗೆ ಬೇಳೆ ಆಮದು ‘ಉಚಿತ ವರ್ಗ’ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಬೆಲೆ ಇಳಿಕೆಗೆ ಸರ್ಕಾರದಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷದವರೆಗೆ ಬೇಳೆ ಆಮದು ‘ಉಚಿತ ವರ್ಗ’ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ಬೇಳೆ ಆಮದು ಮಾಡಿಕೊಳ್ಳುವುದನ್ನು ‘ಉಚಿತ ವರ್ಗ’ದ ಅಡಿಯಲ್ಲಿ ಮಾರ್ಚ್ 2023 ರವರೆಗೆ ವಿಸ್ತರಿಸಿದೆ.

ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡುವ ಕ್ರಮದ ಭಾಗವಾಗಿ ಮಾರ್ಚ್ 2023 ರವರೆಗೆ ತೊಗರಿ ಬೇಳೆ ಮತ್ತು ಉದ್ದಿನ ಬೇಳೆಯನ್ನು ಉಚಿತ ವರ್ಗದಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ದೇಶೀಯ ಲಭ್ಯತೆ ಹೆಚ್ಚಿಸಲು ಮತ್ತು ಅಗತ್ಯ ಆಹಾರ ವಸ್ತುಗಳ ಬೆಲೆಗಳನ್ನು ಸ್ಥಿರಗೊಳಿಸಲು ಮತ್ತೊಂದು ಪೂರ್ವಭಾವಿ ಕ್ರಮ ಕೈಗೊಳ್ಳಲಾಗಿದೆ. ಉಚಿತ ವರ್ಗದಲ್ಲಿ ಆಮದುಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.

ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, ಮಾರ್ಚ್ 28 ರಂದು ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ ತೊಗರಿಬೇಳೆ ಪ್ರತಿ ಕೆಜಿಗೆ 102.99 ರೂ.ಆಗಿದೆ, ಇದು ಒಂದು ವರ್ಷದ ಹಿಂದೆ ಇದ್ದ ದರ ಕೆಜಿಗೆ 105.46 ರೂ.ನಿಂದ ಶೇಕಡ 2.4 ರಷ್ಟು ಇಳಿಕೆಯಾಗಿದೆ.

ಮಾರ್ಚ್ 28 ರಂದು ಉದ್ದಿನ ಬೇಳೆ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 104.3 ರೂ. ಆಗಿದೆ, ಇದು ಒಂದು ವರ್ಷದ ಹಿಂದೆ ಕೆಜಿಗೆ 108.22 ರೂ.ಗಿಂತ ಶೇಕಡ 3.62 ರಷ್ಟು ಕಡಿಮೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...