alex Certify ಎಲೆಕ್ಷನ್ ಹೊತ್ತಲ್ಲೇ ಬಿಜೆಪಿಗೆ ಬಿಸಿತುಪ್ಪವಾದ ಹಾಲಿನ ವಾರ್: ಕರ್ನಾಟಕ ಪ್ರವೇಶಕ್ಕೆ ಬ್ರೇಕ್ ಹಾಕಲು ಅಮುಲ್ ಗೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಷನ್ ಹೊತ್ತಲ್ಲೇ ಬಿಜೆಪಿಗೆ ಬಿಸಿತುಪ್ಪವಾದ ಹಾಲಿನ ವಾರ್: ಕರ್ನಾಟಕ ಪ್ರವೇಶಕ್ಕೆ ಬ್ರೇಕ್ ಹಾಕಲು ಅಮುಲ್ ಗೆ ಸೂಚನೆ

ಬೆಂಗಳೂರು: ಬೆಂಗಳೂರು ಮಾರುಕಟ್ಟೆಗೆ ಅಮುಲ್‌ ಪ್ರವೇಶ ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಡೈರಿ ಮೇಜರ್‌ ರೋಲ್‌ ಔಟ್ ಮುಂದೂಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ವಿಧಾನಸಭೆ ಚುನಾವಣೆ ಹೊತ್ತಲ್ಲೇ ಅಮುಲ್ -ನಂದಿನಿ ವಿಲೀನ ಎಂಬ ವಿಚಾರ ರಾಜಕೀಯ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಇದು ಬಿಜೆಪಿಗೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಕರ್ನಾಟಕ ಪ್ರವೇಶಕ್ಕೆ ಬ್ರೇಕ್ ಹಾಕುವಂತೆ ಅಮುಲ್ ಗೆ ಬಿಜೆಪಿ ತಿಳಿಸಿದೆ ಎನ್ನಲಾಗಿದೆ.

ಅಮುಲ್ ರಾಜ್ಯ ಪ್ರವೇಶ ಘೋಷಣೆಯು ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿವೆ, ಜಾಲತಾಣಗಳಲ್ಲಿಯೂ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹೋಟೆಲ್ ಮಾಲೀಕರು ಅಮುಲ್ ಹಾಲು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಗುಜರಾತ್ ಮೂಲದ ಡೈರಿ ದೈತ್ಯವನ್ನು ಉತ್ತೇಜಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿದೆ.

ರಾಜ್ಯ ಸರ್ಕಾರ, ಆರಂಭದಲ್ಲಿ ಇದನ್ನು ನಿರಾಕರಿಸಿದ್ದು, ವಿರೋಧದ ತೀವ್ರತೆಯಿಂದ ಗಾಬರಿಗೊಂಡಂತೆ ಕಂಡುಬರುತ್ತದೆ, ವಿಶೇಷವಾಗಿ ಈ ವಿಷಯವು ಚುನಾವಣೆಯಲ್ಲಿ ಬೀರಬಹುದಾದ ಪರಿಣಾಮದ ದೃಷ್ಟಿಯಿಂದ ಬಿಜೆಪಿ ನಾಯಕತ್ವವು ಹಗ್ಗಜಗ್ಗಾಟಕ್ಕೆ ಮುಂದಾಗಿದೆ. ಹಾನಿ ತಡೆಯುವ ಪ್ರಯತ್ನದಲ್ಲಿ ತಾತ್ಕಾಲಿಕವಾಗಿ ಕರ್ನಾಟಕಕ್ಕೆ ತನ್ನ ಪ್ರವೇಶವನ್ನು ವಿರಾಮಗೊಳಿಸುವಂತೆ GCMMF ಕೇಳಲು ನಿರ್ಧರಿಸಿದೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಮಾತನಾಡಿ, ಅಮುಲ್‌ನಿಂದ ನಂದಿನಿಗೆ ಯಾವುದೇ ಅಪಾಯವಿಲ್ಲ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...