ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಯಿಟ್ಟು ಜೀವನ ನಡೆಸುವವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ಸಂಪೂರ್ಣ ಲಾಕ್ಡೌನ್ ಸಮಯದಲ್ಲಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆಹಾರ, ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಸೇರಿದಂತೆ ರೈಲ್ವೆ ನಿಲ್ದಾಣದಲ್ಲಿರುವ ಅಂಗಡಿಯವರು ಈ ಪತ್ರ ಬರೆದಿದ್ದಾರೆ.
ಮಾರ್ಚ್ 22ರಿಂದಲೇ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ರೈಲುಗಳ ಓಡಾಟ ನಿಂತಿದೆ. ಇದ್ರಿಂದಾಗಿ ನಿಲ್ದಾಣದಲ್ಲಿರುವ ಅಂಗಡಿ ವ್ಯಾಪಾರಸ್ಥರು ಮನೆಯಲ್ಲಿ ಕುಳಿತಿದ್ದಾರೆ. ಆದ್ರೆ ಪರವಾನಗಿ ಶುಲ್ಕವಾಗಿ ಅವರು 2 ಲಕ್ಷದಿಂದ 40 ಸಾವಿರದವರೆಗೆ ಪಾವತಿ ಮಾಡಬೇಕಾಗಿದೆ. ಇದು ಅಂಗಡಿ ವ್ಯಾಪಾರಸ್ಥರಿಗೆ ಹೊರೆಯಾಗ್ತಿದೆ.
ಅಖಿಲ ಭಾರತ ರೈಲ್ವೆ ಆಹಾರ ಮತ್ತು ಆಹಾರ ಒಕ್ಕೂಟದಿಂದ ಪರವಾನಗಿ ಶುಲ್ಕವನ್ನು ಮನ್ನಾ ಮಾಡುವಂತೆ ರೈಲ್ವೆ ಸಚಿವರು ಮತ್ತು ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗಿದೆ. ಭಾರತದಲ್ಲಿ 9 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ರೈಲು ನಿಲ್ದಾಣಗಳಿವೆ. ನಿಲ್ದಾಣಗಳಲ್ಲಿ ಸುಮಾರು 2 ಲಕ್ಷ ಸ್ಟಾಲ್ಗಳಿವೆ.