alex Certify ರೈಲ್ವೆ ನಿಲ್ದಾಣದ ಅಂಗಡಿ ವ್ಯಾಪಾರಸ್ಥರಿಗೆ ಸಿಗಲಿದ್ಯಾ ನೆಮ್ಮದಿ ಸುದ್ದಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ನಿಲ್ದಾಣದ ಅಂಗಡಿ ವ್ಯಾಪಾರಸ್ಥರಿಗೆ ಸಿಗಲಿದ್ಯಾ ನೆಮ್ಮದಿ ಸುದ್ದಿ…?

ಮೂಲ ಸೌಕರ್ಯ ವಂಚಿತವಾಗಿರುವ ನಗರದ ರೈಲ್ವೆ ...ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಯಿಟ್ಟು ಜೀವನ ನಡೆಸುವವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಸಮಯದಲ್ಲಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆಹಾರ, ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಸೇರಿದಂತೆ ರೈಲ್ವೆ ನಿಲ್ದಾಣದಲ್ಲಿರುವ ಅಂಗಡಿಯವರು ಈ ಪತ್ರ ಬರೆದಿದ್ದಾರೆ.

ಮಾರ್ಚ್ 22ರಿಂದಲೇ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ರೈಲುಗಳ ಓಡಾಟ ನಿಂತಿದೆ. ಇದ್ರಿಂದಾಗಿ ನಿಲ್ದಾಣದಲ್ಲಿರುವ ಅಂಗಡಿ ವ್ಯಾಪಾರಸ್ಥರು ಮನೆಯಲ್ಲಿ ಕುಳಿತಿದ್ದಾರೆ. ಆದ್ರೆ ಪರವಾನಗಿ ಶುಲ್ಕವಾಗಿ ಅವರು 2 ಲಕ್ಷದಿಂದ 40 ಸಾವಿರದವರೆಗೆ ಪಾವತಿ ಮಾಡಬೇಕಾಗಿದೆ. ಇದು ಅಂಗಡಿ ವ್ಯಾಪಾರಸ್ಥರಿಗೆ ಹೊರೆಯಾಗ್ತಿದೆ.

ಅಖಿಲ ಭಾರತ ರೈಲ್ವೆ ಆಹಾರ ಮತ್ತು ಆಹಾರ ಒಕ್ಕೂಟದಿಂದ ಪರವಾನಗಿ ಶುಲ್ಕವನ್ನು ಮನ್ನಾ ಮಾಡುವಂತೆ ರೈಲ್ವೆ ಸಚಿವರು ಮತ್ತು ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗಿದೆ. ಭಾರತದಲ್ಲಿ 9 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ರೈಲು ನಿಲ್ದಾಣಗಳಿವೆ. ನಿಲ್ದಾಣಗಳಲ್ಲಿ ಸುಮಾರು 2 ಲಕ್ಷ ಸ್ಟಾಲ್‌ಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...