ರಮಾನಂದ್ ಸಾಗರ್ ನಿರ್ದೇಶನದ ರಾಮಾಯಣ ಸರಣಿಯಲ್ಲಿ ಲಕ್ಷ್ಮಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನಿಲ್ ಅವರು ಹಳೆಯ ನೆನಪನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ.
ರಾಮಾಯಣ ಚಿತ್ರೀಕರಣದ ಸಂದರ್ಭದಲ್ಲಿ ವಸಿಷ್ಠ ಪಾತ್ರಧಾರಿ ಸುಧೀರ್ ದಲ್ವಿಯನ್ನು ಕೀಟಲೆ ಮಾಡುತ್ತಿದ್ದರ ಬಗ್ಗೆ ಹಾಗೂ ಕಲಾವಿದನ ಮೇಲೆ ಪಕ್ಷಿ ಹಿಕ್ಕೆ ಹಾಕಿದ್ದರಿಂದ ಚಿತ್ರೀಕರಣ ವಿಳಂಬವಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.
ರಾಮ, ಲಕ್ಷ್ಮಣ, ಭರತ, ಶತ್ರುಘ್ನ ವಸಿಷ್ಠರ ಆಶ್ರಮದಲ್ಲಿ ಶಿಕ್ಷಣ ಪಡೆಯುವ ಚಿತ್ರೀಕರಣ ಮಾಡುತ್ತಿದ್ದ ವೇಳೆ ತಮಾಷೆಯ ಸಂದರ್ಭ ನಡೆದಿತ್ತು, ಈ ವೇಳೆ ರಮಾನಂದ್ ಸಾಗರ್ ರವರು ಸಿಟ್ಟುಗೊಂಡಿದ್ದರು ಮತ್ತು ಮರು ಚಿತ್ರೀಕರಣ ಮಾಡಿಸಿದ್ದರು ಎಂದು ಹೇಳಿಕೊಂಡಿದ್ದಾರೆ.