alex Certify ಜಲ ಚಿಕಿತ್ಸೆಯ ಮಹತ್ವ ಹೇಳಿದ​ ನಟ ಅಕ್ಷಯ್​ ಕುಮಾರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಲ ಚಿಕಿತ್ಸೆಯ ಮಹತ್ವ ಹೇಳಿದ​ ನಟ ಅಕ್ಷಯ್​ ಕುಮಾರ್​

ಖಾಸಗಿ ಸುದ್ದಿ ಮಾಧ್ಯಮ ಹಾಗೂ ಹಾರ್ಪಿಕ್​ ಇಂಡಿಯಾ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮಿಷನ್​ ಪಾನಿ ಅಭಿಯಾನಕ್ಕೆ ಈಗಾಗಲೇ ಅನೇಕ ಗಣ್ಯ ನಾಯಕರು ಕೈ ಜೋಡಿಸಿದ್ದಾರೆ. ನೀರನ್ನ ಮಿತವಾಗಿ ಖರ್ಚು ಮಾಡಿ ಅದನ್ನ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಪ್ರಯತ್ನ ಇದಾಗಿದೆ. ಈ ಅಭಿಯಾನದ ರಾಯಭಾರಿಯಾಗಿರುವ ಅಕ್ಷಯ್​ ಕುಮಾರ್​, ಜಲಚಿಕಿತ್ಸೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದ್ದಾರೆ.

ನೀರನ್ನ ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜನರನ್ನುದ್ದೇಶಿಸಿ ಮಾತನಾಡಿದ ಅಕ್ಷಯ್​ ಕುಮಾರ್​, ದೇಹದಲ್ಲಿನ ಅನೇಕ ಸಮಸ್ಯೆಗೆ ಜಲಚಿಕಿತ್ಸೆಗೆ ಹೇಗೆ ಪರಿಹಾರ ನೀಡಿದೆ ಎಂದು ಹೇಳಿದ್ದಾರೆ. ಅಕ್ವಾ ಥೆರಪಿ ಅನ್ನೋದು ನೀರಿನ ಸಹಾಯದಿಂದ ನೀಡುವ ಒಂದು ಚಿಕಿತ್ಸೆಯಾಗಿದೆ. ನಾನು 1990ರಲ್ಲಿ ಸ್ಲಿಪ್​ ಡಿಸ್ಕ್​​ ಸಮಸ್ಯೆಯಿಂದ ಬಳಲುತ್ತಿದ್ದೆ. ಈ ಸಂದರ್ಭದಲ್ಲಿ ಎಷ್ಟು ಚಿಕಿತ್ಸೆ ಪಡೆದರೂ ನನಗೆ ಈ ಸಮಸ್ಯೆಯಿಂದ ಪಾರಾಗೋಕೆ ಸಾಧ್ಯವೇ ಆಗಿರಲಿಲ್ಲ. ಆದರೆ ಹೈಡ್ರೋಥೆರಪಿ ಮೂಲಕ ನಾನು ಸ್ಲಿಪ್​ ಡಿಸ್ಕ್​ ಸಮಸ್ಯೆಯಿಂದ ಪಾರಾದೆ ಎಂದು ಹೇಳಿದ್ರು.

ಸಿನಿಮಾವೊಂದರ ಚಿತ್ರೀಕರಣದ ಸಂದರ್ಭದಲ್ಲಿ ಕಷ್ಟಕರವಾದ ಸಾಹಸವೊಂದನ್ನ ಪ್ರದರ್ಶಿಸುತ್ತಿದ್ದ ವೇಳೆ ಸ್ಲಿಪ್​ ಡಿಸ್ಕ್​ ಸಮಸ್ಯೆ ಎದುರಾಯಿತು. ಯಾವುದೇ ಚಿಕಿತ್ಸೆಯೂ ಈ ಸಮಸ್ಯೆಗೆ ಪರಿಹಾರ ನೀಡದಿದ್ದಾಗ ವೈದ್ಯರು ಜಲಚಿಕಿತ್ಸೆಗೆ ಒಳಗಾಗುವಂತೆ ಸೂಚನೆ ನೀಡಿದ್ರು. ನೀರಿನಲ್ಲಿ ವಿವಿಧ ವ್ಯಾಯಾಮಗಳನ್ನ ಮಾಡಿಸುವ ಮೂಲಕ ನನಗೆ ಈ ಸಮಸ್ಯೆಯಿಂದ ವೈದ್ಯರು ಬಚಾವ್​ ಮಾಡಿದ್ರು ಎಂದು ಹೇಳಿದ್ರು. ಅಲ್ಲದೇ ವಾಟರ್​ ಟ್ರೆಡ್​ ಮಿಲ್​ನಲ್ಲಿ ತಾನು ಜಾಗಿಂಗ್​ ಮಾಡ್ತಿರುವ ವಿಡಿಯೋವನ್ನ ಅಕ್ಷಯ್​ ಕುಮಾರ್​ ಪ್ರದರ್ಶಿಸಿದ್ರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...