alex Certify ಕೋವಿಡ್ ಲಸಿಕೆ ಪಡೆಯುವ ಮುನ್ನ ʼರಕ್ತದಾನʼ ಮಾಡಿದ ನಟ ವಶಿಷ್ಠ ಸಿಂಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಪಡೆಯುವ ಮುನ್ನ ʼರಕ್ತದಾನʼ ಮಾಡಿದ ನಟ ವಶಿಷ್ಠ ಸಿಂಹ

ದೇಶಾದ್ಯಂತ ಕೋವಿಡ್ ಸಂಕಟದ ಅವಧಿಯಲ್ಲಿ ರಕ್ತದ ಅಗತ್ಯ ಹೆಚ್ಚಿರುವ ನಡುವೆ ರಕ್ತದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ ನಟ ವಶಿಷ್ಠ ಸಿಂಹ ಅವರು ಕೋವಿಡ್ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ.

ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯವಿದ್ದ ಜನರಿಗೆ ರಕ್ತದಾನ ಮಾಡಿ ಎಂದು ಸಿಂಹ ಇದೇ ವೇಳೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಕ್ತ ಹಾಗೂ ಪ್ಲಾಸ್ಮಾದ ಕೊರತೆ ಮೇಲೆ ಬೆಳಕು ಚೆಲ್ಲಿದ ವಶಿಷ್ಠ, ಪ್ರತಿಯೊಬ್ಬರೂ ಸಹ ಈ ನಿಟ್ಟಿನಲ್ಲಿ ಮುಂದೆ ಬಂದು ಪರಿಸ್ಥಿತಿಯನ್ನು ನಿಭಾಯಿಸಲು ನೆರವಾಗಬೇಕೆಂದು ಕೇಳಿಕೊಂಡಿದ್ದಾರೆ.

ಗ್ರಾಹಕರಿಗೆ ಆಕ್ಸಿಜನ್ ʼಕಾನ್ಸಂಟ್ರೇಟರ್‌ʼ ಒದಗಿಸಲಿದೆ ಓಲಾ

ಈ ಮುನ್ನ ಮತ್ತೊಂದು ವಿಡಿಯೋ ಮಾಡಿದ್ದ ವಶಿಷ್ಠ, ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಂಡು, ರಕ್ತ ಹಾಗೂ ಪ್ಲಾಸ್ಮಾ ದಾನ ಮಾಡಲು ಕೇಳಿಕೊಂಡಿದ್ದರು. ಕೋವಿಡ್ ಎರಡನೇ ಅಲೆಗೆ ಸ್ಯಾಂಡಲ್‌ವುಡ್‌ನ ಅನೇಕ ನಟರು ಸಿಲುಕಿಕೊಂಡಿದ್ದು, ನಟಿ ಅನು ಪ್ರಭಾಕರ್‌ ಮುಖರ್ಜಿ ಇತ್ತೀಚೆಗೆ ತಮಗೂ ಕೋವಿಡ್-19 ಸೋಂಕು ತಗುಲಿದೆ ಎಂದು ಅಭಿಮಾನಿಗಳಿಗೆ ಲೈವ್‌ ವಿಡಿಯೋವೊಂದರಲ್ಲಿ ತಿಳಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...