alex Certify ಸುಶಾಂತ್ ʼಆತ್ಮಹತ್ಯೆʼ ಕುರಿತು ಬಹಿರಂಗವಾಯ್ತು ಶಾಕಿಂಗ್‌ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ʼಆತ್ಮಹತ್ಯೆʼ ಕುರಿತು ಬಹಿರಂಗವಾಯ್ತು ಶಾಕಿಂಗ್‌ ಸತ್ಯ

ಮುಂಬೈ: ಬಹಳ ಸಮಯದ ಹಿಂದೆಯೇ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಗ್ಗೆ ಮಾತನಾಡಿಕೊಂಡಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ. ಅವರು ತಮ್ಮ ಸ್ನೇಹಿತೆ ಆಯೇಶಾ ಕಪೂರ್ ಆದ್ಲಾಕ ಅವರ ಜೊತೆ ಮೊದಲ ಭೇಟಿ ವೇಳೆ ಆತ್ಮಹತ್ಯೆ ಬಗ್ಗೆ ಚರ್ಚಿಸಿದ್ದರು ಎಂದು ಆಕೆ ಹೇಳಿಕೊಂಡಿದ್ದಾರೆ.

ಬಾಂದ್ರಾ ಹೌಸ್ ನಲ್ಲಿ ಮೊದಲ ಭೇಟಿಯಾಗಿದ್ದ ಇವರು ಬಹಳಷ್ಟು ವಿಷಯಗಳನ್ನು ಚರ್ಚೆ ಮಾಡಿದ್ದರು. ಜೀವನದ ಮೌಲ್ಯಗಳು, ಕೌತುಕಗಳು, ಜೀವನದ ಉದ್ದೇಶ ಹಾಗೂ ಆತ್ಮಹತ್ಯೆಗಳಂತಹ ವಿಷಯಗಳು ಕೂಡ ಚರ್ಚೆಯಾಗಿದ್ದವು ಎಂದು ಅವರು ತಮ್ಮಿಬ್ಬರ ಫೋಟೋವನ್ನು ಹಾಕಿಕೊಂಡು ಬರೆದುಕೊಂಡಿದ್ದಾರೆ.

ಈಚೆಗಷ್ಟೇ ಆಯೇಶಾ ತಮ್ಮ ಭೇಟಿಯ ಫೋಟೋವನ್ನು ಅಪ್ಲೋಡ್ ಮಾಡಿಕೊಂಡು ಹಳೆಯ ನೆನಪುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಎಲ್ಲ ಖ್ಯಾತನಾಮರಿಗಿಂತ ಸುಶಾಂತ್ ಭಿನ್ನವಾಗಿದ್ದರು. ಅವರಲ್ಲಿ ಉತ್ಸಾಹ ಹಾಗೂ ಆಶಾವಾದವಿತ್ತು. ಸುಶಾಂತ್ ಗೆ ಸರಿಯಾದ ಸಮಯಕ್ಕೆ ಸಹಾಯ ಸಿಕ್ಕಿದ್ದರೆ ಅವರನ್ನು ಸಂಕಷ್ಟದಿಂದ ಪಾರು ಮಾಡಬಹುದಿತ್ತು ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...