alex Certify ಸಂಜಯ ದತ್ ವ್ಯಕ್ತಿತ್ವದ ಗುಟ್ಟು ಬಿಚ್ಚಿಟ್ಟ ಇರ್ಫಾನ್‌ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಜಯ ದತ್ ವ್ಯಕ್ತಿತ್ವದ ಗುಟ್ಟು ಬಿಚ್ಚಿಟ್ಟ ಇರ್ಫಾನ್‌ ಪುತ್ರ

ಮುಂಬೈ: ತಮ್ಮ ತಂದೆಯ ಅನಾರೋಗ್ಯ ಕಾಲದಲ್ಲಿ, ಅವರ ಮರಣದ ನಂತರ ನಮ್ಮ ಕುಟುಂಬಕ್ಕೆ ಮೊದಲು ಸಹಾಯ ಮಾಡಿದ್ದವರು ಸಂಜಯ ದತ್ ಎಂದು ದಿವಂಗತ ನಟ ಇರ್ಫಾನ್ ಖಾನ್ ಪುತ್ರ ಬಬ್ಲಿ ಹೇಳಿದ್ದಾರೆ.

ಬಾಲಿವುಡ್ ಸ್ಟಾರ್ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಮೂರನೇ ಹಂತದಲ್ಲಿ‌ದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಇರ್ಫಾನ್ ಪುತ್ರ ಬಬ್ಲಿ ಅವರು ಸಂಜಯ ದತ್ ಅವರ ಪರೋಪಕಾರ ಭಾವವನ್ನು ತಮ್ಮ ಇನ್ಸ್ಟಾಗ್ರಾಂ‌ ಪೋಸ್ಟ್ ನಲ್ಲಿ ನೆನೆಸಿಕೊಂಡಿದ್ದಾರೆ.

ಸಂಜಯ ದತ್ ಹಾಗೂ ಇರ್ಫಾನ್ ಖಾನ್ ಒಟ್ಟಿಗೆ ಕುಳಿತ ಫೋಟೋ ಪೋಸ್ಟ್ ಮಾಡಿರುವ ಬಬ್ಲಿ, ದತ್ ಅವರನ್ನು ಸಂಜು ಬಾಬಾ ಎಂದು ಬರೆದಿದ್ದಾರೆ. “ಅವರು ಶೀಘ್ರ ಗುಣವಾಗಲಿ. ಸಂಜು ಬಾಯ್ ಹಾಗೂ ಅವರ ಕುಟುಂಬ ಬಯಸಿದಷ್ಟು ಕಾಲಾವಕಾಶ ಅವರಿಗೆ ಸಿಗಲಿ. ಸಂಜು ಬಾಬಾ ಒಬ್ಬ ಟೈಗರ್, ಫೈಟರ್ ಎಂಬುದನ್ನು ಹಿಂದಿನ ಕಾಲ ಹೇಳಿದೆ. ನೀವು ಮತ್ತೆ ಹಿಂದಿನಂತೆ ಆಗುತ್ತೀರಿ” ಎಂದು ಬಬ್ಲಿ ಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...