alex Certify ಮುಂಬೈ ಬಿಟ್ಟು ಏಕಾಏಕಿ ದುಬೈಗೆ ತೆರಳಿದ ಸಂಜಯ್ ದತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಬಿಟ್ಟು ಏಕಾಏಕಿ ದುಬೈಗೆ ತೆರಳಿದ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಆಗಸ್ಟ್ 11 ರಂದು ನಟ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಈಗಾಗಲೇ ಸಂಜಯ್ ದತ್ ಗೆ ಚಿಕಿತ್ಸೆ ಶುರುವಾಗಿದೆ. ಇಷ್ಟು ದಿನ ಮುಂಬೈನಲ್ಲಿ ಚಿಕಿತ್ಸೆ ಮಾಡಿಸಿಕೊಳ್ತಿದ್ದ ಸಂಜಯ್ ದತ್ ಈಗ ವಿದೇಶಕ್ಕೆ ತೆರಳಿದ್ದಾರೆ.

ಸಂಜಯ್ ದತ್, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಸುತ್ತಿನ ಕೀಮೋಥೆರಪಿಯನ್ನು ಪೂರ್ಣಗೊಳಿಸಿದ್ದಾರೆ. ಈಗ ಪತ್ನಿ ಮಾನ್ಯತಾ ದತ್ ಜೊತೆ ವಿದೇಶಕ್ಕೆ ತೆರಳಿದ್ದಾರೆ. ನಟ ಇದ್ದಕ್ಕಿದ್ದಂತೆ ಮುಂಬೈ ತೊರೆದಿರುವುದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.

ಸಂಜಯ್ ದತ್ ಪತ್ನಿ ಮಾನ್ಯತಾ ದತ್ ಸೆಪ್ಟೆಂಬರ್ 15 ರಂದು ಸಂಜೆ 4 ಗಂಟೆಗೆ ಮುಂಬೈನಿಂದ ದುಬೈಗೆ ತೆರಳಿದ್ದಾರೆ. ಮಕ್ಕಳನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದ ದತ್ ಹಾಗೂ ಮಾನ್ಯತಾ ಇದೇ ಕಾರಣಕ್ಕೆ ದುಬೈಗೆ ಹೋಗಿದ್ದಾರೆ ಎನ್ನಲಾಗ್ತಿದೆ. 7 ರಿಂದ 10 ದಿನಗಳ ಕಾಲ ದುಬೈನಲ್ಲಿದ್ದು ನಂತರ ಸಂಜಯ್ ಮತ್ತು ಮಾನ್ಯತಾ ಮುಂಬೈಗೆ ಮರಳಲಿದ್ದಾರೆ ಎಂದು ವರದಿಯ ಮೂಲಗಳು ತಿಳಿಸಿವೆ.

ಶ್ವಾಸಕೋಶ ಕ್ಯಾನ್ಸರ್ ಮಧ್ಯೆಯೂ ಸಂಜಯ್ ದತ್ ಚಿತ್ರೀಕರಣ ಮುಂದುವರೆಸಿದ್ದರು. ʼಶಂಶೇರಾʼ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...