ರೈತ ಪ್ರತಿಭಟನೆ ವಿಚಾರದಲ್ಲಿ ಮಾರ್ಮಿಕ ಪ್ರತಿಕ್ರಿಯೆ ನೀಡಿದ ಸಲ್ಲು ಭಾಯ್ 05-02-2021 2:34PM IST / No Comments / Posted In: Latest News, Entertainment ದೇಶದಲ್ಲಿ ರೈತ ಪ್ರತಿಭಟನೆ ಕಾವು ಜೋರಾಗಿದ್ದು ಸೆಲೆಬ್ರಿಟಿಗಳ ಟ್ವೀಟ್ ವಾರ್ ಜೋರಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ರೈತ ಪ್ರತಿಭಟನೆ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದ ಬಾಲಿವುಡ್ ನಟ ಸಲ್ಮಾನ್ ಖಾನ್, ಇಂಡಿಯನ್ ಪ್ರೋ ಮ್ಯೂಸಿಕ್ ಲೀಗ್ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್ ತಮ್ಮ ನಿಲುವನ್ನ ಹಂಚಿಕೊಂಡಿದ್ದಾರೆ. ಸರಿಯಾದ ಕೆಲಸವನ್ನ ಮಾಡಬೇಕು. ಎಲ್ಲಾ ರೀತಿಯಲ್ಲಿ ಸರಿ ಎನಿಸುವ ಕೆಲಸ ಮಾಡಬೇಕು. ಅತ್ಯಂತ ಉದಾತ್ತವಾದ ಕೆಲಸವನ್ನ ಮಾಡಲೇಬೇಕು ಎಂದು ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. ರೈತ ಪ್ರತಿಭಟನೆ ವಿಚಾರಬಾಗಿ ಶಾರೂಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ಸೈಫ್ ಅಲಿ ಖಾನ್ ಹೀಗೆ ಯಾವುದೇ ಖಾನ್ಗಳೂ ಟ್ವೀಟ್ ಮೂಲಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. View this post on Instagram A post shared by Viral Bhayani (@viralbhayani)