alex Certify ಕುತೂಹಲಕ್ಕೆ ಕಾರಣವಾಯ್ತು ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜೊತೆಗಿನ ಪ್ಯಾರಾನಾರ್ಮಲ್ ತಜ್ಞನ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಯ್ತು ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜೊತೆಗಿನ ಪ್ಯಾರಾನಾರ್ಮಲ್ ತಜ್ಞನ ಮಾತು

ಮುಂಬೈ: ‘ಕೇದಾರ್ ನಾಥ್’ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ನಿಧನವಾಗಿ ಒಂದು ತಿಂಗಳಾಗಿದೆ.

ಅವರ ಅಭಿಮಾನಿಗಳು ಇನ್ನೂ ಆಘಾತದಿಂದ ಹೊರ ಬಂದಿಲ್ಲ. ಕುಟುಂಬದವರು, ಅಭಿಮಾನಿಗಳು, ಸ್ನೇಹಿತರು ಇನ್ನೂ ಆಘಾತದಲ್ಲೇ ಇದ್ದು, ಹೀಗಿರುವಾಗಲೇ ಅಚ್ಚರಿಯ ಬೆಳವಣಿಗೆ ನಡೆದಿದೆ.

ಸುಶಾಂತ್ ಸಿಂಗ್ ಮತ್ತೆ ಮರಳಿ ಬರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಅದು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಸಂತೋಷದ ಸಂಗತಿ ಎಂದರೆ ಸ್ವರ್ಗದಲ್ಲಿರುವ ಸುಶಾಂತ್ ನಕ್ಷತ್ರಗಳ ಜೊತೆಗಿದ್ದಾರೆ ಎಂದು ಪ್ಯಾರಾನಾರ್ಮಲ್ ಎಕ್ಸ್ ಪರ್ಟ್ ಒಬ್ಬರು ಹೇಳಿದ್ದಾರೆ.

ಜನಪ್ರಿಯ ಪ್ಯಾರಾನಾರ್ಮಲ್ ಎಕ್ಸ್ ಪರ್ಟ್ ಆಗಿರುವ ಸ್ಟೀವ್ ಹಫ್ ಅವರು, ಸುಶಾಂತ್ ಸಿಂಗ್ ರಜಪೂತ್ ಆತ್ಮದೊಂದಿಗೆ ಮಾತನಾಡಿರುವುದಾಗಿ ಹೇಳಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಅಭಿಮಾನಿಗಳು ಇಮೇಲ್ ಮತ್ತು ಸಂದೇಶಗಳ ಮೂಲಕ ಸುಶಾಂತ್ ಆತ್ಮದೊಂದಿಗೆ ಮಾತನಾಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದಾರೆನ್ನಲಾಗಿದೆ.

ಜುಲೈ 13 ರಂದು ಸುಶಾಂತ್ ಸಿಂಗ್ ಆತ್ಮದೊಂದಿಗೆ ಮಾತನಾಡಿದ್ದು ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಆದರಲ್ಲಿ ಸುಶಾಂತ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿರುವುದಾಗಿ ಹೇಳಿಕೊಂಡಿದ್ದು ಸುಶಾಂತ್ ಸಿಂಗ್ ಒಬ್ಬರೇ ಇಲ್ಲ ಅವರೊಂದಿಗೆ ಲೇಡಿ ಗೈಡ್ ಕೂಡ ಇದ್ದಾರೆ ಎಂದು ತಿಳಿಸಿದ್ದಾರೆ.

ಹಿಂದೆ ಪ್ಯಾಟ್ರಿಕ್ ಸೂಯೆಜ್, ಮೈಕಲ್ ಜಾಕ್ಸನ್ ಅವರಂತಹ ಖ್ಯಾತನಾಮರ ಆತ್ಮಗಳೊಂದಿಗೆ ಸ್ಟೀವ್ ಹಫ್ ಮಾತನಾಡಿರುವುದಾಗಿ ವೆಬ್ ಸೈಟ್ ತಿಳಿಸಿದೆ. 10 ವರ್ಷಗಳಿಂದ ಆತ್ಮಗಳೊಂದಿಗೆ ಸ್ಟೀವ್ ಮಾತನಾಡುತ್ತಿದ್ದಾರೆ. ಆತ್ಮಗಳ ಶಬ್ದ ಕೇಳುವ ಯಂತ್ರವನ್ನು ಅವರು ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಸುಶಾಂತ್ ಜೊತೆಗೆ ಮತ್ತೊಂದು ಸೆಷನ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...