alex Certify ಕೊರೊನಾ ವಾರಿಯರ್​ ಸೋನು ಸೂದ್​ ಗೆ ಕಲಾಕೃತಿ ಮೂಲಕ ಗೌರವಾರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಾರಿಯರ್​ ಸೋನು ಸೂದ್​ ಗೆ ಕಲಾಕೃತಿ ಮೂಲಕ ಗೌರವಾರ್ಪಣೆ

ಕರೊನಾ ವೈರಸ್ ಎಚ್ಚರಿಕೆ ನಡುವೆಯೇ ದೇಶದಲ್ಲಿ ನವರಾತ್ರಿ ಹಬ್ಬವನ್ನ ಆಚರಿಸಲಾಗ್ತಾ ಇದೆ. ಕೊಲ್ಕತ್ತಾದ ದುರ್ಗಾ ಪೂಜಾ ಕಮಿಟಿ ಈಗಾಗಲೇ ಸಾಕಷ್ಟು ದೇವಿ ಮೂರ್ತಿಗಳನ್ನ ಪೂಜೆಗೆ ಇರಿಸಿದ್ದು ಒಂದೊಂದು ದೇವಿ ಮೂರ್ತಿಯೂ ಈ ಬಾರಿಯ ಕರೊನಾದ ಕತೆಯನ್ನೇ ಹೇಳುತ್ತಿದೆ. ಇದೀಗ ಈ ಕಮಿಟಿ ಕರೊನಾದ ಸಮಯದಲ್ಲಿ ಬಡವರಿಗೆ ಹೆಗಲಾಗಿ ನಿಂತ ಬಾಲಿವುಡ್​ ನಟ ಸೋನು ಸೂದ್​ರನ್ನ ಗೌರವಿಸಿದೆ .

ಕರೊನಾ ಸಮಯದಲ್ಲಿ ವಲಸೆ ಕಾರ್ಮಿಕರು ಹುಟ್ಟೂರಿಗೆ ವಾಪಸ್ಸಾಗಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಇಂತಹ ಸಂದರ್ಭದಲ್ಲಿ ಸೋನು ಸೂದ್​ ಕಾರ್ಮಿಕರಿಗೆ ಕೈಲಾದ ಸಹಾಯ ಮಾಡಿದ್ದಾರೆ. ಈ ಮಾನವೀಯ ಬುದ್ಧಿ ಇತರರಿಗೆ ಮಾದರಿಯಾಗಬೇಕು ಅನ್ನೋ ಕಾರಣದಿಂದ ಈ ರೀತಿಯ ಮೂರ್ತಿಗಳನ್ನ ಮಾಡಿದ್ದೇವೆ ಅಂತಾರೆ ಪ್ರಫುಲ್ಲಾ ಕನಕ್​ ಅಸೋಸಿಯೇಷನ್​ನ ಶ್ರೀಂಜಯ್​ ದತ್.

ಕೊಲ್ಕತ್ತಾದಲ್ಲಿ ತಯಾರಾಗಿರೋ ಕಲಾಕೃತಿಯಲ್ಲಿ ಕೆಲ ಕಾರ್ಮಿಕರು ಸೈಕಲ್​ನಲ್ಲಿ ಮನೆಗೆ ಹೋಗ್ತಾ ಇದ್ರೆ, ಇನ್ನು ಕೆಲವರು ರೈಲು ನಿಲ್ದಾಣದಲ್ಲಿ ಮಲಗಿದ್ದಾರೆ. ಮತ್ತೆ ಕೆಲವರು ದಾರಿಯಲ್ಲಿ ಟ್ರಕ್​​ಗಳಿಗೆ ಕೈ ಮಾಡ್ತಾ ಇದಾರೆ. ಇವರಿಗೆಲ್ಲ ನಟ ಸೋನು ಸೂದ್​ ಬಸ್​ಗಳ ಸೌಕರ್ಯ ಕಲ್ಪಿಸಿಕೊಡ್ತಿರುವ ರೀತಿಯಲ್ಲಿ ಕಲಾಕೃತಿಯನ್ನ ನಿರ್ಮಿಸಲಾಗಿದೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...