alex Certify ಅನಾರೋಗ್ಯದ ಹಿನ್ನೆಲೆ ನಿರೂಪಣೆಯಿಂದ ಹಿಂದೆ ಸರಿದ ಕಿಚ್ಚ…..! ಏನಾಗುತ್ತೆ ʼಬಿಗ್​ಬಾಸ್ʼ​ ಕತೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾರೋಗ್ಯದ ಹಿನ್ನೆಲೆ ನಿರೂಪಣೆಯಿಂದ ಹಿಂದೆ ಸರಿದ ಕಿಚ್ಚ…..! ಏನಾಗುತ್ತೆ ʼಬಿಗ್​ಬಾಸ್ʼ​ ಕತೆ….?

ನಟ ಹಾಗೂ ನಿರ್ದೇಶಕ ಕಿಚ್ಚ ಸುದೀಪ್​ ಅನಾರೋಗ್ಯದಲ್ಲಿ ಏರುಪೇರಾಗಿದ್ದು ಈ ವಾರದ ಬಿಗ್​ ಬಾಸ್​ ಶೋ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಸ್ವತಃ ನಟ ಸುದೀಪ್​ ಮಾಹಿತಿ ನೀಡಿದ್ದಾರೆ.

ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ವೀಕೆಂಡ್​ಗೂ ಮೊದಲು ನನ್ನ ಆರೋಗ್ಯ ಸುಧಾರಿಸಬಹುದು ಎಂದು ಅಂದಾಜಿಸಿದ್ದೆ. ಆದರೆ ನನ್ನ ವೈದ್ಯರು ನನಗೆ ವಿಶ್ರಾಂತಿಯ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಈ ಬಾರಿಯ ವೀಕೆಂಡ್​​ ಬಿಗ್​ಬಾಸ್​ ಶೋ ಮಿಸ್​ ಮಾಡಿಕೊಳ್ಳಲಿದ್ದೇನೆ.

ಬಿಗ್​ಬಾಸ್​​ನ ಕ್ರಿಯೇಟಿವ್​ ಟೀಂ ಈ ವಾರದ ಎಲಿಮಿನೇಷನ್​ಗೆ ಯಾವ ರೀತಿಯಲ್ಲಿ ಪ್ಲಾನ್​ ಮಾಡಬಹುದು ಎಂದು ನೋಡೋದಕ್ಕೆ ಉತ್ಸುಕನಾಗಿದ್ದೇನೆ ಎಂದು ಟ್ವೀಟಾಯಿಸಿದ್ದಾರೆ.

ಸುದೀಪ್​ ಯಾವ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅನ್ನೋದ್ರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಸುದೀಪ್​ ಅನಾರೋಗ್ಯದಿಂದಾಗಿ ಬಿಗ್​ಬಾಸ್ ಸೀಸನ್​ 8ರ​ ಕತೆ ಏನಾಗುತ್ತೋ ಅಂತಾ ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ .

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...