ಹೈದರಾಬಾದ್: ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅವರ ಕುಟುಂಬ ಸದಸ್ಯರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.
ರಾಮ್ ಚರಣ್ ಅವರ ಪತ್ನಿ ಉಪಾಸನಾ ಅವರ ತಾತ ಉಮಾಪತಿ ರಾವ್ ಮೇ 27 ರಂದು ನಿಧನರಾಗಿದ್ದು ನಿಜಾಮಬಾದ್ ನ ದ್ಯಾಮಕೊಂಡದಲ್ಲಿ ಅಂತಿಮ ಕ್ರಿಯೆಗಳನ್ನು ನಡೆಸಲಾಗಿದೆ. ಉಮಾಪತಿ ರಾವ್ ಅವರ ಪುತ್ರ ಅಮೆರಿಕದಿಂದ ಬರಬೇಕಿದ್ದ ಕಾರಣ ಭಾನುವಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ದ್ಯಾಮಕೊಂಡದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಉಮಾಪತಿ ರಾವ್ ಕುಟುಂಬದವರು ಮತ್ತು ಚಿರು ಕುಟುಂಬದವರು ಭಾಗಿಯಾಗಿದ್ದ ವೇಳೆಯಲ್ಲಿ ಜೇನುನೊಣ ದಾಳಿ ನಡೆಸಿವೆ. ತಕ್ಷಣವೇ ಭದ್ರತಾಸಿಬ್ಬಂದಿ ಎಲ್ಲರ ರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ. ಇದೊಂದು ಸಣ್ಣ ಘಟನೆಯಾಗಿದ್ದು ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ.