ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂದಿನ ಚಿತ್ರ ರಾಮ್ಸೇತು ಶೂಟಿಂಗ್ಗಾಗಿ ಉತ್ತರ ಪ್ರದೇಶದಲ್ಲಿರುವ ರಾಮಜನ್ಮ ಭೂಮಿ ಅಯೋಧ್ಯೆಗೆ ತೆರಳುವ ಸಾಧ್ಯತೆ ಇದೆ.
ಅಯೋಧ್ಯೆಯಲ್ಲಿ ಶೂಟಿಂಗ್ ಮಾಡಲು ರಾಮ್ಸೇತು ಚಿತ್ರತಂಡ ಉತ್ತರ ಪ್ರದೇಶ ಸಿಎಂ ಕಚೇರಿಗೆ ಮನವಿ ಸಲ್ಲಿಸಿದೆ ಅಂತಾ ಮೂಲಗಳು ಮಾಹಿತಿ ನೀಡಿವೆ.
ಅಕ್ಷಯ್ ಕುಮಾರ್ ನವೆಂಬರ್ 14ರಂದು ರಾಮ್ಸೇತು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ನೀಡಿದ್ದರು. ಈಗಾಗಲೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಕ್ಷಯ್ ಕುಮಾರ್ ಚಿತ್ರದ ಫಸ್ಟ್ ಲುಕ್ನ್ನ ರಿವೀಲ್ ಮಾಡಿದ್ದಾರೆ. ಪೋಸ್ಟರ್ನಲ್ಲಿ ಅಕ್ಷಯ್ ಕುಮಾರ್ ಕೇಸರಿ ಬಣ್ಣದ ಶಾಲನ್ನ ಹೊದ್ದು ನಿಂತಿದ್ರೆ ಹಿಂದೆ ಸಮುದ್ರ ಹಾಗೂ ಬಿಲ್ಲು ಹಿಡಿದ ರಾಮನ ಚಿತ್ರವಿದೆ.
ರಾಮ್ಸೇತು ಸಿನಿಮಾಗೆ ಅಭಿಷೇಕ್ ಶರ್ಮಾ ಆಕ್ಷನ್ ಕಟ್ ಹೇಳ್ತಿದ್ರೆ, ಅರುಣಾ ಭಾಟಿಯಾ ಹಾಗೂ ವಿಕ್ರಂ ಮಲ್ಹೋತ್ರಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.