ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಟ್ರೋಲಿಗೊಳಗಾದ ಅಕ್ಷಯ್..! 18-01-2021 9:43PM IST / No Comments / Posted In: Latest News, Entertainment ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು ಮಾತ್ರವಲ್ಲದೇ ಅಭಿಮಾನಿಗಳ ಬಳಿಯೂ ದೇಣಿಗೆ ನೀಡುವಂತೆ ಮನವಿ ಮಾಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗ್ತಿದ್ದಾರೆ. ಹಳೆದ ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ ದೇವಾಲಯಗಳಿಗೆ ದೇಣಿಗೆ ನೀಡೋದು ಹಣ ವ್ಯರ್ಥ ಮಾಡಿದಂತೆ ಎಂದು ಹೇಳಿದ್ದಾರೆ. ಗೀತ ರಚನೆಕಾರ ಹಾಗೂ ಚಿತ್ರ ಕಥೆಗಾರ ಪುನೀತ್ ಶರ್ಮಾ ಎಂಬವರು ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಎಷ್ಟೋ ಜನರು ಹಸಿವಿನಿಂದ ಸಾಯುತ್ತಿರುವಾಗ ಜನರು ದೇವಾಲಯಗಳಿಗೆ ದೇಣಿಗೆ ನೀಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ ಅಕ್ಷಯ್ ಕುಮಾರ್. ಮಾತ್ರವಲ್ಲದೇ ತಮ್ಮ ಒಎಂಜಿ ಚಿತ್ರದ ಶ್ರೀಕೃಷ್ಣನ ಪಾತ್ರದ ಬಗ್ಗೆ ಮಾತನಾಡುವ ಅಕ್ಷಯ್ ಕುಮಾರ್, ದೇವಾಲಯಗಳಿಗೆ ದಾನ ಮಾಡುವ ಬದಲು ನಿರ್ಗತಿಕರಿಗೆ ಸಹಾಯ ಮಾಡಿ ಎಂದು ಹೇಳಿದ್ದಾರೆ. ದೇವರಿಗೆ ಏಕೆ ಹಾಲು ಹಾಗೂ ಎಣ್ಣೆಯನ್ನ ವ್ಯರ್ಥ ಮಾಡುತ್ತೇವೆ? ದೇವರೇನಾದರೂ ಬಂದು ಎಣ್ಣೆ, ಹಾಲು ಹಾಗೂ ತೆಂಗಿನಕಾಯಿ ಬೇಕೆಂದು ಕೇಳಿದ್ದಾನೆಯೇ? ದೇವರಿಗೆ ಇದನ್ನೆಲ್ಲ ಕೊಡುವ ಬದಲು ನಿರ್ಗತಿಕರಿಗೆ ನೀಡಿ ಎಂದು ಹೇಳಿದ್ದಾರೆ. असली कलाकार वही है जो कहानी के हिसाब से अपना किरदार बदल ले. 2017 में मंदिर नहीं जाने को कहने वाला आज कारसेवक बन गया…बताओ! ?? pic.twitter.com/gcv7zqRQDo — Keshava (@Kumar_Ke5hav) January 17, 2021 True Words pic.twitter.com/VgkqpgFnE4 — Puneet Sharma – पुनीत शर्मा – پُنیت شرما (@PuneetVuneet) January 17, 2021