alex Certify ಬಿಜೆಪಿ ಸೇರಿದ ಬಳಿಕ ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಖುಷ್ಬೂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸೇರಿದ ಬಳಿಕ ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಖುಷ್ಬೂ

ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಸುಂದರ್​​ ಕಾಂಗ್ರೆಸ್​ ಬುದ್ದಿಗೇಡಿ ಪಕ್ಷ ಎಂದಿದ್ದ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಮಾತ್ರವಲ್ಲದೇ ಇನ್ನೆಂದು ಈ ರೀತಿಯ ಹೇಳಿಕೆಗಳನ್ನ ನೀಡಲ್ಲ ಅಂತಾ ಹೇಳಿದ್ದಾರೆ .

ಚೆನ್ನೈನಲ್ಲಿ ಮಾತನಾಡಿದ ನಟಿ ಖುಷ್ಬೂ ಸುಂದರ್,​ ಕಾಂಗ್ರೆಸ್​ ಬುದ್ಧಿಮಾಂದ್ಯ ಪಕ್ಷ ಎಂದು ಜರಿದಿದ್ದರು, ಇದರಿಂದ ಆಕ್ರೋಶಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ತಮಿಳುನಾಡಿನ ಚೆನ್ನೈ, ಕಾಂಜಿಪುರಂ, ಚೆಂಗಲ್​ಪೇಟ್​, ಮಧುರೈ, ಕೊಯಂಬತ್ತೂರು ಸೇರಿದಂತೆ ಒಟ್ಟು 30 ಪೊಲೀಸ್​ ಠಾಣೆಗಳಲ್ಲಿ ಖುಷ್ಬೂ ವಿರುದ್ಧ ದೂರು ದಾಖಲಿಸಿದ್ದರು.

ಖುಷ್ಬೂ ಹೇಳಿಕೆ ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಖುಷ್ಬೂ ಕಾಂಗ್ರೆಸ್​ ಬಳಿ ಕ್ಷಮೆಯಾಚಿಸಿದ್ದಾರೆ. ನಾನು ಬುದ್ಧಿಗೇಡಿಯಾಗಿದ್ದೆ. ನನ್ನ ಪತಿ ಮಾಡಿದ ಬ್ರೇನ್​ ವಾಶ್​ನಿಂದಾಗಿ ಈ ರೀತಿಯ ಹೇಳಿಕೆಯನ್ನ ನೀಡಿದೆ. ಪ್ರೇರಣೆ ಏನೇ ಇರಲಿ. ನಾನು ಈ ರೀತಿಯ ಮಾತುಗಳನ್ನಾಡಬಾರದಿತ್ತು. ಇನ್ನೆಂದು ಈ ರೀತಿಯ ನಡವಳಿಕೆ ಪುನರಾವರ್ತಿತವಾಗದಂತೆ ನೋಡಿಕೊಳ್ತೇನೆ ಅಂತ ಕ್ಷಮಾಪಣೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...