alex Certify ‌ʼನಿಮ್ಮನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಗುರುʼ ಎಂದ ಮುಂಬೈ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼನಿಮ್ಮನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಗುರುʼ ಎಂದ ಮುಂಬೈ ಪೊಲೀಸ್

ಮುಂಬೈ: ಇರ್ಫಾನ್ ಖಾನ್ ಭಾರತೀಯ ಚಿತ್ರರಂಗದಲ್ಲಿ‌‌ ತಮ್ಮ ಅತ್ಯುತ್ತಮ ನಟನೆಯಿಂದ ಎಲ್ಲರ ಮನಗೆದ್ದವರು. 2018 ರಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಲಂಡನ್ ನಲ್ಲಿ ಚಿಕಿತ್ಸೆಯನ್ನು ಸಹ ಪಡೆದಿದ್ದರು. ಒಂದು ವಾರದ ಹಿಂದೆ ಕರುಳಿನ ಸೋಂಕಿನಿಂದ ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರ ನಿಧರಾಗಿದ್ದಾರೆ. ಅವರ ಅಗಲಿಕೆ ಚಿತ್ರರಂಗವನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಮತ್ತು ಅಭಿಮಾನಿಗಳಿಗೆ ನಂಬಲು ಸಾಧ್ಯವಿಲ್ಲ ಎಂಬಂತಾಗಿದೆ.

ದುರದೃಷ್ಟ ಎಂದರೆ, ಅವರ ಅಂತಿಮ ದರ್ಶನ ಪಡೆಯಲು ಲಾಕ್ ‌ಡೌನ್ ನಿಂದಾಗಿ ಯಾರಿಗೂ ಬರಲು ಸಾಧ್ಯವಾಗಿಲ್ಲ. ಚಿತ್ರರಂಗ ಮತ್ತು ಇಡೀ ದೇಶ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ಹಾಗೆಯೇ ಮುಂಬೈ ಪೊಲೀಸರು ಸಹ ತಮ್ಮ ಟ್ವೀಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

ಅವರ ಕಪ್ಪು ಬಿಳುಪಿನ ಫೋಟೋದೊಂದಿಗೆ “ತುಮಕೋ ಯಾದ್ ರಖೆಂಗೆ ಗುರು ಹಮ್” (ನಿಮ್ಮನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ ಗುರು) ಎಂದು ಬರೆದು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

54 ವರ್ಷದ ಇರ್ಫಾನ್ ಸ್ವಲ್ಪ ದಿನಗಳ ಹಿಂದೆಯಷ್ಟೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಅವರ ಅಗಲಿಕೆಯನ್ನು ಪಿಕೂ ಚಿತ್ರದ ನಿರ್ದೇಶಕ ಮತ್ತು ಇರ್ಫಾನ್ ಅವರ ಗೆಳೆಯ ಸುಜಿತ್ ಸಿರ್ಕಾರ್ ಅವರು ಮೊದಲು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು. ಇರ್ಫಾನ್ ಅವರ ಕೊನೆಯ ಚಿತ್ರ “ಅಂಗ್ರೇಜಿ ಮೀಡಿಯಮ್” ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...