alex Certify ಹೊಸ ಬಟ್ಟೆ ಕೊಡಿಸಿ, ಇಲ್ಲ ಅಪ್ಪ- ಅಮ್ಮನನ್ನು ಕರೆಸಿ: ನಶೆ ರಾಣಿಯರ ಹೊಸ ವರಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಬಟ್ಟೆ ಕೊಡಿಸಿ, ಇಲ್ಲ ಅಪ್ಪ- ಅಮ್ಮನನ್ನು ಕರೆಸಿ: ನಶೆ ರಾಣಿಯರ ಹೊಸ ವರಸೆ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಈ ಬಾರಿ ಜೈಲಿನ ಕಂಬಿ ಹಿಂದೆಯೇ ದೀಪಾವಳಿ ಆಚರಿಸಬೇಕಾದ ಸ್ಥಿತಿ… ಜೈಲು ಸೇರಿದ್ದರೂ ಕೂಡ ನಟಿ ಮಣಿಯರ ಆಟಾಟೋಪ ಕಡಿಮೆಯಾಗಿಲ್ಲ. ಜೈಲು ಸಿಬ್ಬಂದಿಗಳಿಗೆ ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾರಂತೆ ನಶೆ ರಾಣಿಯರು.

ದೀಪಾವಳಿ ಹಿನ್ನೆಲೆಯಲ್ಲಿ ನಟಿ ಮಣಿಯರು, ತಮಗೆ ಹೊಸ ಬಟ್ಟೆ ಕೊಡಿಸಿ, ಇಲ್ಲವಾದಲ್ಲಿ ಪೋಷಕರನ್ನು ಕರೆಸಿ ಎಂದು ಜೈಲು ಸಿಬ್ಬಂದಿಗಳಿಗೆ ಡಿಮ್ಯಾಂಡ್ ಮಾಡಿದ್ದಾರೆ.

ಕಳೆದ 50 ದಿನಗಳಿಂದ ತಮ್ಮ ಪೋಷಕರ ಮುಖ ನೋಡಲು ಬಿಟ್ಟಿಲ್ಲ. ದೀಪಾವಳಿಗೆ ಅವರು ಹೊಸ ಬಟ್ಟೆಗಳನ್ನು ಕೊಡಿಸುತ್ತಿದ್ದರು. ನೀವೆ ಹೊಸ ಬಟ್ಟೆ ಕೊಡಿ, ಇಲ್ಲವಾದಲ್ಲಿ ಪೋಷಕರಿಗೆ ಹೊಸ ಬಟ್ಟೆ ತಂದು ಕೊಡಲು ಅವಕಾಶ ನೀಡಿ ಎಂದು ಗೋಗರೆಯುತ್ತಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...