alex Certify ಸುಶಾಂತ್ ಸಾವಿನ ಬಗ್ಗೆ ಹೊರ ಬಿದ್ದಿದೆ ಈ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಸಾವಿನ ಬಗ್ಗೆ ಹೊರ ಬಿದ್ದಿದೆ ಈ ಸತ್ಯ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ವಿಚಾರಣೆ ನಡೆಯುತ್ತಿದೆ. ಏಮ್ಸ್ ವಿಧಿವಿಜ್ಞಾನ ತಂಡ, ಸಿಬಿಐ ತಂಡ ಮತ್ತು ಸಿಎಫ್ಎಸ್ಎಲ್ ತಜ್ಞರ ನಡುವೆ ಸಭೆ ನಡೆದಿದೆ. ಏಮ್ಸ್ ವಿಧಿವಿಜ್ಞಾನ ತಂಡ ನೀಡಿದ ವರದಿಯನ್ನು ಸಿಬಿಐಗೆ ಸಲ್ಲಿಸಲಾಗಿದೆ. ವರದಿಯ ಮುಖ್ಯ ವಿಷ್ಯವೊಂದು ಬಹಿರಂಗವಾಗಿದೆ.

ಮೂಲಗಳ ಪ್ರಕಾರ ಸುಶಾಂತ್ ದೇಹದಲ್ಲಿ ಯಾವುದೇ ವಿಷ ಕಂಡು ಬಂದಿಲ್ಲ ಎನ್ನಲಾಗಿದೆ. ಸಿಬಿಐ ತನಿಖೆ ಅಂತಿಮ ಹಂತದಲ್ಲಿದೆ, ಏಮ್ಸ್ ವಿಧಿವಿಜ್ಞಾನ ವಿಭಾಗ ಮತ್ತು ಸಿಎಫ್ಎಸ್ಎಲ್ ತನಿಖಾ ವರದಿ  ಬಹುತೇಕ ಒಂದೇ ಆಗಿದೆ. ಅಗತ್ಯವಿದ್ದರೆ, ಸಿಬಿಐ ಸುಶಾಂತ್ ಅವರ ಕುಟುಂಬ ಸದಸ್ಯರನ್ನು ಸಹ ವಿಚಾರಣೆ ಮಾಡಲಿದೆ.

ಸುಶಾಂತ್ ಜೊತೆ ವಾಸವಾಗಿದ್ದ ಜನರು ಪ್ರಕರಣಕ್ಕೆ ಸಂಬಂಧಿಸಿದ ಅನೇಕ ಮಾಹಿತಿಯನ್ನು ನೀಡಿದ್ದಾರೆ. ಎಫ್‌ಐಆರ್‌ನಲ್ಲಿ ದಾಖಲಾಗಿರುವ ಯಾರೊಬ್ಬರಿಗೂ ಇನ್ನೂ ಕ್ಲೀನ್ ಚಿಟ್ ನೀಡಲಾಗಿಲ್ಲ. ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ವರದಿ ಹೊರ ಬೀಳುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...