alex Certify ದರ್ಶನ್ ಕಟೌಟ್ ಗೆ ‘ಬಿಯರ್’ ಸುರಿದು ಸಂಭ್ರಮಿಸಿದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರ್ಶನ್ ಕಟೌಟ್ ಗೆ ‘ಬಿಯರ್’ ಸುರಿದು ಸಂಭ್ರಮಿಸಿದ ಅಭಿಮಾನಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಶಾ ಭಟ್ ಅಭಿನಯದ ‘ರಾಬರ್ಟ್’ ಚಿತ್ರ ಮಹಾಶಿವರಾತ್ರಿಯ ದಿನವಾದ ಗುರುವಾರದಂದು ಬಿಡುಗಡೆಗೊಂಡಿದೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ತೆರೆಮೇಲೆ ಕಂಡ ಅಭಿಮಾನಿಗಳು ಭಾರಿ ಸಂತಸಗೊಂಡಿದ್ದಾರೆ.

‘ರಾಬರ್ಟ್’ ಚಿತ್ರವನ್ನು ವೀಕ್ಷಿಸಲು ಬಿಡುಗಡೆಗೊಂಡ ಎಲ್ಲ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ರಾತ್ರಿಯಿಂದಲೇ ಬೀಡು ಬಿಟ್ಟು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟೌಟ್ ಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ಮಾಡಿದ್ದಾರೆ. ಜೊತೆಗೆ ಕೆಲ ಚಿತ್ರಮಂದಿರಗಳ ಬಳಿ ಮೊದಲ ಪ್ರದರ್ಶನ ವೀಕ್ಷಿಸಲು ಬಂದ ಪ್ರೇಕ್ಷಕರಿಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಿದ್ದಾರೆ.

ತಿಪಟೂರಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೆಲ ಅಭಿಮಾನಿಗಳು ದರ್ಶನ್ ಅವರ ಕಟೌಟ್ ಗೆ ಬಿಯರ್ ಸುರಿದು ಸಂಭ್ರಮಿಸಿದ್ದಾರೆ. ತ್ರಿಮೂರ್ತಿ ಚಿತ್ರಮಂದಿರದ ಆವರಣದಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...