alex Certify ದರ್ಶನ್‌ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ನಿರ್ಮಾಪಕ ಉಮಾಪತಿ ವಿರುದ್ದ ನೇರ ಆರೋಪ ಮಾಡಿದ ಅರುಣಾ ಕುಮಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರ್ಶನ್‌ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ನಿರ್ಮಾಪಕ ಉಮಾಪತಿ ವಿರುದ್ದ ನೇರ ಆರೋಪ ಮಾಡಿದ ಅರುಣಾ ಕುಮಾರಿ

ನಟ ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದರ್ಶನ್​ ಆಪ್ತರ ನಡುವೆ ಆರೋಪ ಪ್ರತ್ಯಾರೋಪಗಳ ನಡುವೆಯೇ ಪ್ರಕರಣದ ಆರೋಪಿ ಅರುಣಾ ಕುಮಾರಿ ಇಷ್ಟೆಲ್ಲಾ ಆಗೋಕೆ ನಿರ್ಮಾಪಕ ಉಮಾಪತಿಯೇ ನೇರ ಕಾರಣ ಎಂದು ದೂರಿದ್ದಾರೆ.

ಈ ಪ್ರಕರಣದಲ್ಲಿ ನಟ ದರ್ಶನ್​ ನಿಜಕ್ಕೂ ಅಮಾಯಕ. ಆದರೆ ಉಮಾಪತಿಯವರದ್ದು ಸಂಪೂರ್ಣ ತಪ್ಪಿದೆ. ನನ್ನ ಲೈಫ್​ ಹಾಳಾದರೆ ಅದಕ್ಕೆ ಉಮಾಪತಿಯೇ ನೇರ ಕಾರಣ. ನಾನು ಲೋನ್​ಗೆ ಅಪ್ರೋಚ್​ ಮಾಡಿದ್ದೆ ಅಷ್ಟೇ. ಲೋನ್​ ಅಪ್ರೋಚ್​ ಮಾಡೋಕೂ ಅಪ್ಲೈ ಮಾಡೋಕು ತುಂಬಾನೇ ವ್ಯತ್ಯಾಸ ಇದೆ.

ಸುದ್ದಿಗೋಷ್ಠಿಯಲ್ಲಿ ಉಮಾಪತಿ ನನ್ನ ಪರಿಚಯ ಇರಲಿಲ್ಲ ಎಂದೆಲ್ಲ ಹೇಳಿದ್ದಾರೆ. ಆದರೆ ನನಗೆ ಅವರು ಮಾರ್ಚ್ 30ರಿಂದಲೇ ಪರಿಚಯವಾಗಿದ್ದರು. ನಟ ದರ್ಶನ್​ರನ್ನ ನೇರವಾಗಿ ಭೇಟಿಯಾಗೋದು ಅಂದರೆ ಯಾರಿಂದಲೂ ಅಷ್ಟು ಸುಲಭವಾಗಿ ಆಗೋ ಕೆಲಸವಲ್ಲ. ಅಂತದ್ರಲ್ಲಿ ನಾನು 2 ಬಾರಿ ಅವರನ್ನ ಭೇಟಿಯಾಗಿದ್ದೇನೆ ಅಂದರೆ ನನ್ನ ಹಿಂದೆ ಯಾರಿದ್ದರು ಅನ್ನೋದನ್ನ ನೀವೇ ಊಹೆ ಮಾಡಿ ಎಂದಿದ್ದಾರೆ.

ಉಮಾಪತಿ ಹಾಗೂ ಹರ್ಷ ನಡುವೆ ಸಮಸ್ಯೆ ಇದ್ದರೆ ಅವರೇ ಬಗೆಹರಿಸಿಕೊಳ್ಳಬಹುದಿತ್ತು. ಉಮಾಪತಿ ನೇರವಾಗಿ ದರ್ಶನ್​​ರಿಗೆ ಹರ್ಷ ಬಗ್ಗೆ ಹೇಳಬಹುದಿತ್ತು. ಈ ರೀತಿ ನನ್ನನ್ನ ಏಕೆ ಮಧ್ಯಕ್ಕೆ ಸಿಲುಕಿಸುತ್ತಿದ್ದಾರೆ ಅನ್ನೋದೇ ಗೊತ್ತಾಗುತ್ತಿಲ್ಲ. ಈ ಘಟನೆಗಳ ಬಳಿಕ ನಾನು ಡಿಪ್ರೆಷನ್​ಗೆ ಹೋಗಿದ್ದೇನೆ. ಕಷ್ಟವೋ ಸುಖವೋ ನಾನು ಹೇಗೋ ಬದುಕುತ್ತೇನೆ. ನನ್ನನ್ನ ನನ್ನ ಪಾಡಿಗೆ ಬಿಟ್ಟು ಬಿಡಿ. ನಾಳೆ ನನ್ನ ಲೈಫ್​ ಹಾಳಾದರೆ ದರ್ಶನ್​ ಆಗಲಿ ಉಮಾಪತಿಯಾಗಲಿ ಅದನ್ನ ಸರಿ ಮಾಡೋಕೆ ಬರೋದಿಲ್ಲ ಎಂದು ಹೇಳಿದ್ರು.

ಕುಮಾರ್​ ನನ್ನ ಪತಿ ಎಂದು ಹೇಳಿಕೊಳ್ಳೋಕೆ ನನಗೆ ನಾಚಿಗೆ ಆಗುತ್ತದೆ. ಆತನಿಂದ ನನ್ನ ಕೆಲ ಫೋಟೋಗಳನ್ನ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಉಮಾಪತಿಗೆ ಲಾಭ ಏನಿದೆ ಅಥವಾ ನಷ್ಟವಿದೆಯಾ ನನಗೆ ಗೊತ್ತಿಲ್ಲ. ನನಗಂತೂ ಇದರಿಂದ ನಯಾಪೈಸೆ ಲಾಭವಿಲ್ಲ. ಆದರೆ ನನ್ನನ್ನ ಇದರಲ್ಲಿ ಉಮಾಪತಿ ಎಳೆಯಬಾರದಿತ್ತು. ನನಗೆ ಈಗ ಆತ್ಮಹತ್ಯೆ ಮಾಡಿಕೊಳ್ಳೋಣ ಎನಿಸುತ್ತಿದೆ. ನಾನು ಅವರೊಂದಿಗೆ ಜನರಲ್​ ಆಗಿಯೇ ಚಾಟ್​ ಮಾಡಿದ್ದೆ. ನಿಮ್ಮ ಅಕ್ಕ ತಂಗಿಗೆ ನೀವು ಇದೇ ರೀತಿ ಸಂದೇಶ ಕಳಿಸುತ್ತಿದ್ರಾ ಎಂದು ಉಮಾಪತಿಗೆ ಅರುಣಾ ಕುಮಾರಿ ಪ್ರಶ್ನೆ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...