alex Certify ಕಿರುತೆರೆಗೂ ಕಾಲಿಟ್ಟ ಡ್ರಗ್ಸ್ ಸಂಕಷ್ಟ: ಗಟ್ಟಿಮೇಳದಿಂದ ಹಿಡಿದು ಬ್ರಹ್ಮಗಂಟಿನವರೆಗೂ ವಿಚಾರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರುತೆರೆಗೂ ಕಾಲಿಟ್ಟ ಡ್ರಗ್ಸ್ ಸಂಕಷ್ಟ: ಗಟ್ಟಿಮೇಳದಿಂದ ಹಿಡಿದು ಬ್ರಹ್ಮಗಂಟಿನವರೆಗೂ ವಿಚಾರಣೆ

ಬೆಂಗಳೂರು: ಹಿರಿತೆರೆಯಾಯ್ತು ಇದೀಗ ಕಿರುತೆರೆಗೂ ಡ್ರಗ್ಸ್ ಸಂಕಷ್ಟ ಎದುರಾಗಿದೆ. ಬ್ರಹ್ಮಗಂಟು, ಗಟ್ಟಿಮೇಳ ಧಾರಾವಾಹಿಯ ನಟ-ನಟಿಯರಿಗೂ ಡ್ರಗ್ಸ್ ನಂಟಿನ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ಗೀತಾಭಾರತಿ ಭಟ್ ಹಾಗೂ ಅಭಿಶೇಕ್ ದಾಸ್ ಅವರಿಗೆ ಆಂತರಿಕ ಭದ್ರತಾ ದಳ(ಐಎಸ್ ಡಿ) ಇಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ.

ನೋಟಿಸ್ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಗೀತಾ ಭಟ್, ಐಎಸ್ ಡಿಯಿಂದ ನೋಟೀಸ್ ಬಂದಿರುವುದು ನಿಜ. ನಮಗೆ ಆಗದವರು ಯಾರೋ ನನ್ನ ಹೆಸರು ಹೇಳಿರಬಹುದು. ಆದರೆ ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ವಿಚಾರಣೆಗೆ ಕರೆದಿದ್ದಾರೆ ಎಂದರೆ ನಾವು ತಪ್ಪು ಮಾಡಿದ್ದೇವೆ ಎಂದಲ್ಲ. ವಿಚಾರಣೆಗೆ ಹಾಜರಾಗುತ್ತಿರುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿರುವ ಗಟ್ಟಿಮೇಳ ಖ್ಯಾತಿ ನಟ ಅಭಿಷೇಕ್, ನನಗೂ ಈ ಪಾರ್ಟಿಗಳಿಗೂ ಯಾವುದೇ ಸಂಬಂಧವಿಲ್ಲ. ಬಂಧಿತರ ಪರಿಚಯವೂ ನನಗಿಲ್ಲ. ನಾನು ತಪ್ಪು ಮಾಡಿಲ್ಲ ಎಂದಮೇಲೆ ಭಯವೇಕೆ? ಐಎಸ್ ಡಿಯಿಂದ ನೋಟೀಸ್ ಬಂದಿದ್ದು, 12 ಗಂಟೆಗೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಹಾಗಾಗಿ ವಿಚಾರಣೆ ಎದುರಿಸುವುದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...