alex Certify ಕಾಜಲ್ ಅಗರ್ವಾಲ್-ಗೌತಮ್ ಹನಿಮೂನ್ ಕ್ಯಾನ್ಸಲ್ ಆಗಲು ಕಾರಣವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಜಲ್ ಅಗರ್ವಾಲ್-ಗೌತಮ್ ಹನಿಮೂನ್ ಕ್ಯಾನ್ಸಲ್ ಆಗಲು ಕಾರಣವೇನು ಗೊತ್ತಾ….?

ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್, ಉದ್ಯಮಿ ಗೌತಮ್ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹನಿಮೂನ್ ಗೆ ವಿದೇಶಕ್ಕೆ ಹೋಗುವ ಪ್ಲಾನ್ ಅನ್ನು ಕಾಜಲ್ ದಂಪತಿ ಮುಂದೂಡಿದ್ದಾರಂತೆ.

ವಿವಾಹದ ಬಳಿಕ ಕಾಜಲ್ ಹಾಗೂ ಗೌತಮ್ ಹನಿಮೂನ್ ಗಾಗಿ ಯುರೋಪ್ ರಾಷ್ಟ್ರಗಳಿಗೆ ಹೋಗುವ ಪ್ಲಾನ್ ಮಾಡಿದ್ದರಂತೆ. ಆದರೆ ಇದೀಗ ಈ ಪ್ಲಾನ್ ರದ್ದಾಗಿದೆಯಂತೆ. ಕಾರಣ ಆಚಾರ್ಯ ಸಿನಿಮಾ ಶೂಟಿಂಗ್.

ಹೌದು. ನಟಿ ಕಾಜಲ್ ಅಗರ್ವಾಲ್ ವಿವಾಹದ ಬಳಿಕವೂ ತಾವು ಸಿನಿಮಾಗಳಲ್ಲಿ ಅಭಿನಯಿಸುವುದಾಗಿ ಈ ಹಿಂದೆ ಹೇಳಿದ್ದರು. ಅದರಂತೆ ಇದೀಗ ಮದುವೆ ಬಳಿಕ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರಂತೆ. ಅದಕ್ಕಾಗಿ ಹನಿಮೂನ್ ಗೆ ವಿದೇಶಕ್ಕೆ ತೆರಳುವ ಯೋಜನೆ ಕ್ಯಾನ್ಸಲ್ ಮಾಡಿದ್ದಾರಂತೆ ಕಾಜಲ್.

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಕೊರಟಾಲ ಶಿವ ನಿರ್ದೇಶನದಲ್ಲಿ ಮುಡಿಬರುತ್ತಿರುವ ತೆಲುಗಿನ ಬಹುನಿರೀಕ್ಷಿತ ಆಚಾರ್ಯ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...