ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ ಚಿರಂಜೀವಿ ಯಾವುದೇ ಪಾತ್ರಕ್ಕಾದರೂ ಸೈ ಎನಿಸುವ ನಟ. ಹಲವಾರು ಸಿನಿಮಾಗಳು ಹಾಗೂ ಅಭಿಮಾನಿಗಳ ಅಭಿರುಚಿಗೆ ತಕ್ಕಂತೆ ನಟಿಸುವ ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಅದ್ಯಾಕೋ ಈ ಸಿನಿಮಾಗೆ ನಾಯಕಿ ನಟಿಯೇ ಸಿಗುತ್ತಿಲ್ಲ ಎನ್ನಲಾಗಿದೆ.
ಹೌದು, ಈ ಸಿನಿಮಾದಲ್ಲಿ ಚಿರಂಜೀವಿಗೆ ತ್ರಿಷಾ ನಾಯಕಿಯಾಗಿದ್ದರು. ಆದರೆ ಬೇರೆ ಬೇರೆ ಕಾರಣದಿಂದಾಗಿ ಈ ಸಿನಿಮಾದಿಂದ ತ್ರಿಷಾ ಹೊರ ಬಂದರು. ನಂತರ ನಟಿ ಕಾಜಲ್ ನಟಿಸುತ್ತಾರೆ ಎನ್ನಲಾಗಿತ್ತು. ಇದಕ್ಕೆ ಕಾಜಲ್ ಕೂಡ ಒಪ್ಪಿಗೆ ನೀಡಿದ್ದರಂತೆ. ಆದರೆ ಇದೀಗ ಕಾಜಲ್ ಕೂಡ ಹೊರ ಬಂದಿದ್ದಾರೆ ಎನ್ನಲಾಗಿದೆ.
ಕಾಜಲ್ ತಮಿಳಿನ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರಂತೆ. ಇದು ಬಿಗ್ ಬಜೆಟ್ ನ ಸಿನಿಮಾ ಎನ್ನಲಾಗಿದೆ. ಈ ಸಿನಿಮಾಗೆ ಕಾಜಲ್ ಮುಂಗಡ ಹಣವನ್ನೂ ಪಡೆದಿದ್ದಾರಂತೆ. ಈ ಹಿಂದೆ ಒಪ್ಪಿಕೊಂಡ ಸಿನಿಮಾ ಡೇಟ್ ಮತ್ತು ಆಚಾರ್ಯ ಸಿನಿಮಾದ ಡೇಟ್ ಕ್ಲಾಶ್ ಆಗುತ್ತದೆ ಎಂಬ ಕಾರಣಕ್ಕೆ ಆಚಾರ್ಯ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.