alex Certify ಅಕ್ರಮ ಸಂಬಂಧ ಪ್ರಶ್ನಿಸಿದವನ ಜೀವತೆಗೆದ ದುರುಳರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಪ್ರಶ್ನಿಸಿದವನ ಜೀವತೆಗೆದ ದುರುಳರು

ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಜೆ ಗುಡ್ಡೆಯಂಗಡಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಹೊಸೂರು ಗ್ರಾಮದ ನವೀನ್ ನಾಯ್ಕ್ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ.

ಉದ್ಯಳ್ಕ ಗ್ರಾಮದ ಮಹಿಳೆಯ ಮನೆಗೆ ಮಲ್ಪೆಯ ಗೌತಮ್ ಎಂಬಾತ ಬಂದು ಹೋಗುತ್ತಿದ್ದ. ಇವರ ನಡುವೆ ಅಕ್ರಮ ಸಂಬಂಧ ಇರುವ ಬಗ್ಗೆ ನವೀನ್ ನಾಯ್ಕ್ ಆಕ್ಷೇಪಿಸಿದ್ದ. 15 ದಿನಗಳ ಹಿಂದೆ ಗೌತಮ್ ಮತ್ತು ನವೀನ್ ನಾಯ್ಕ್ ನಡುವೆ ಗಲಾಟೆಯಾಗಿದೆ. ಇದಾದ ನಂತರದಲ್ಲಿ ನವೀನ್ ನಾಯ್ಕ್ ಮನೆಗೆ ಬಂದಿದ್ದ ಮಹಿಳೆ ತಮ್ಮ ಸಂಬಂಧದ ವಿಚಾರಕ್ಕೆ ತಲೆ ಹಾಕಿದ್ರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿದ್ದಳೆನ್ನಲಾಗಿದೆ.

ಭಾನುವಾರ ರಾತ್ರಿ ತನ್ನ ಸಹಚರರೊಂದಿಗೆ ಬಂದಿದ್ದ ಗೌತಮ್, ನವೀನ್ ನಾಯ್ಕ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪೊಲೀಸರು ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದು, ಘಟನೆ ನಡೆದ ಮೂರು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...