alex Certify ಗಂಡನಿಲ್ಲದ ವೇಳೆಯಲ್ಲಿ ಮನೆಗೆ ಬಂದ ಪ್ರಿಯಕರನಿಂದ ಘೋರ ಕೃತ್ಯ, ಕೆಲವೇ ಗಂಟೆಗಳಲ್ಲಿ ಆರೋಪಿ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನಿಲ್ಲದ ವೇಳೆಯಲ್ಲಿ ಮನೆಗೆ ಬಂದ ಪ್ರಿಯಕರನಿಂದ ಘೋರ ಕೃತ್ಯ, ಕೆಲವೇ ಗಂಟೆಗಳಲ್ಲಿ ಆರೋಪಿ ವಶಕ್ಕೆ

ಬೆಂಗಳೂರು: ಬೆಂಗಳೂರಿನ ಬನಶಂಕರಿಯಲ್ಲಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಯಾರಬ್ ನಗರದಲ್ಲಿ ವಿವಾಹಿತೆಯನ್ನು ಕೊಲೆ ಮಾಡಲಾಗಿತ್ತು. ಮಹಿಳೆ ಜೊತೆಗೆ ಸಂಬಂಧ ಹೊಂದಿದ್ದ 17 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮೊಬೈಲ್ ಕರೆ ಮತ್ತು ಮೆಸೇಜ್ ನೋಡಿ ಪತ್ನಿಯೊಂದಿಗೆ ಪತಿ ಜಗಳವಾಡಿದ್ದರು.

ಸಂಬಂಧಿಕರ ಪುತ್ರನೊಂದಿಗೆ ಪತ್ನಿ ಸಂಬಂಧದ ಬಗ್ಗೆ ಪತಿಗೆ ಗೊತ್ತಿರಲಿಲ್ಲ. ಬಾಲಕನ ಜೊತೆ ನಿನ್ನೆ ಮಹಿಳೆ ಜಗಳವಾಡಿದ್ದಾಳೆ. ಮಕ್ಕಳನ್ನು ತಾಯಿ ಮನೆಗೆ ಕಳಿಸಿ ಪ್ರಿಯಕರನನ್ನು ಕಳೆದುಕೊಂಡಿದ್ದಾಳೆ. ಯಾರೂ ಇಲ್ಲದ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಹಿಳೆ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದ ಬಾಲಕ ಕೊಲೆ ನಂತರ ಮನೆಯಲ್ಲಿದ್ದ. ಫೋನ್ ಕರೆ ಆಧಾರದಲ್ಲಿ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬನಶಂಕರಿ ಪೊಲೀಸರಿಂದ ಆರೋಪಿ ಬಾಲಕನ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಹತ್ಯೆ ಮಾಡಿದ ನಂತರ ಮನೆಗೆ ಬೀಗ ಹಾಕಿ ಆರೋಪಿ ಪರಾರಿಯಾಗಿದ್ದು, ಪತಿ ಮನೆಗೆ ಬಂದು ಬೀಗ ಒಡೆದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಪರಿಚಿತರೇ ಮಹಿಳೆಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಕೃತ್ಯ ಬೆಳಕಿಗೆ ಬಂದ ಕೆಲವೇ ಬಂದ ಗಂಟೆಗಳಲ್ಲಿ ಆರೋಪಿ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...