alex Certify ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ: ರಾತ್ರಿ ತೋಟದ ಮನೆಗೆ ಪ್ರಿಯಕರನ ಕರೆಸಿಕೊಂಡ ಪತ್ನಿಯಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ: ರಾತ್ರಿ ತೋಟದ ಮನೆಗೆ ಪ್ರಿಯಕರನ ಕರೆಸಿಕೊಂಡ ಪತ್ನಿಯಿಂದಲೇ ಘೋರ ಕೃತ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದು, ಪೊಲೀಸರ ತನಿಖೆಯಲ್ಲಿ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

38 ವರ್ಷದ ಲಕ್ಷ್ಮಣ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಈತನ ಪತ್ನಿ ಅಕ್ರಮ ಸಂಬಂಧ ಬೆಳೆಸಿದ್ದು, ತಮ್ಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಕೊಲೆಗೆ ಸಂಚು ರೂಪಿಸಿದ್ದಾರೆ. ಜಮೀನಿನಲ್ಲಿದ್ದ ಮನೆಗೆ ಪ್ರಿಯಕರನನ್ನು ಕರೆಸಿಕೊಂಡ ಮಹಿಳೆ ಗಂಡನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಬೈಕ್ ನಲ್ಲಿ ಘಟಪ್ರಭಾ ಕಾಲುವೆ ಬಳಿ ತೆಗೆದುಕೊಂಡು ಹೋಗಿ ಬೈಕ್ ಸಮೇತ ಎಸೆದಿದ್ದಾರೆ.

ಅಪಘಾತದಲ್ಲಿ ಲಕ್ಷ್ಮಣ ಮೃತಪಟ್ಟಿರುವಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ತಮಗೇನೂ ಗೊತ್ತಿಲ್ಲವೆನ್ನುವಂತೆ ಸುಮ್ಮನಾಗಿದ್ದಾರೆ.  ಲಕ್ಷ್ಮಣ ನಾಪತ್ತೆಯಾದ ಬಗ್ಗೆ ಸಹೋದರ ತಿಪ್ಪಣ್ಣ ಮುರಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...