alex Certify ರಾಮನವಮಿಯಂದು ನಿಮ್ಮ ದಿನ ಭವಿಷ್ಯ ಹಾಗೂ ರಾಶಿಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮನವಮಿಯಂದು ನಿಮ್ಮ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ

ಆರೋಗ್ಯದ ಬಗ್ಗೆ ಬಹಳ ಗಮನ ನೀಡಬೇಕು. ಏಕೆಂದರೆ, ಕೆಲಸದ ಮಧ್ಯೆ ಆರೋಗ್ಯದ ಕಡೆ ನಿಗಾ ಮಾಡಲಾಗದೆ ಅದು ಔದ್ಯೋಗಿಕ ಮತ್ತು ವೃತ್ತಿ ಬದುಕಿನ ಮೇಲೂ ಪರಿಣಾಮ ಬೀರಲಿದೆ. ಪಾರ್ಟನರ್​ಶಿಪ್ ವ್ಯವಹಾರದಲ್ಲಿ ಲಾಭ ಸಿಗಲಿದೆ.

ವ್ಯಾಪಾರ ಆರಂಭಿಸಿದ್ದಲ್ಲಿ ವಿಸ್ತರಣೆಗೆ ಅವಕಾಶಗಳು ದೊರೆತು, ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶಗಳು ಸಹ ಇವೆ. ಉದ್ಯೋಗದಲ್ಲಿ ಬಡ್ತಿ, ನೀವು ಕೇಳಿದ ಕಡೆಗೆ ವರ್ಗಾವಣೆ, ವೇತನ ಹೆಚ್ಚಳವನ್ನು ನಿರೀಕ್ಷಿಸಬಹುದು.

ಅದೃಷ್ಟ ಸಂಖ್ಯೆ:- 5

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವೃಷಭ ರಾಶಿ

ಉದ್ಯೋಗ ಹಾಗೂ ವೃತ್ತಿಯಲ್ಲಿ ಬಹಳ ಸವಾಲಿನ ಸಮಯ ಇದು. ಗಡುವಿನೊಳಗೆ ಕೆಲಸ ಮುಗಿಸುವುದಕ್ಕೆ ಶತಾಯಗತಾಯ ಪ್ರಯತ್ನಿಸಿ. ಇಲ್ಲದಿದ್ದಲ್ಲಿ ನಿಮ್ಮ ವರ್ಚಸ್ಸು- ಹೆಸರಿಗೆ ಧಕ್ಕೆ ಆಗಬಹುದು. ತಾಳ್ಮೆ, ಸಂಯಮ ಬಹಳ ಅಗತ್ಯ. ಉದ್ಯೋಗ, ವ್ಯಾಪಾರ ಅಥವಾ ವ್ಯವಹಾರ ಯಾವುದೇ ಆದಲ್ಲಿ ನಿಮ್ಮ ವರ್ಚಸ್ಸನ್ನು ಕಳೆದುಕೊಳ್ಳದಿರಿ.

ಈಗಾಗಲೇ ಹಣ ತೊಡಗಿಸಿದ ವ್ಯಾಪಾರದಲ್ಲಿ ದೊಡ್ಡ ನಷ್ಟ ಎದುರಾಗಬಹುದು. ನಿಮ್ಮ ಮೂಲ ಸ್ವಭಾವದಲ್ಲಿ ಬದಲಾವಣೆ ಆಗಬೇಕಿದೆ. ಎಲ್ಲವೂ ಹೀಗೇ ಆಗಬೇಕು ಎಂಬ ನಿಮ್ಮ ಧೋರಣೆಯಲ್ಲಿ ರಾಜೀ ಮಾಡಿಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದೆ.

ಅದೃಷ್ಟ ಸಂಖ್ಯೆ:- 2

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮಿಥುನ ರಾಶಿ

ನಿಮ್ಮ ನಿರ್ಲಕ್ಷ್ಯ ಸ್ವಭಾವದಿಂದ ಸ್ನೇಹಿತರನ್ನು ದೂರ ಮಾಡಿಕೊಳ್ಳುವ ಯೋಗ ಇದೆ. ಇದರಿಂದ ಉದ್ಯೋಗ – ವೃತ್ತಿ ಮೇಲೆ ನಕಾರಾತ್ಮಕ ಪರಿಣಾಮ ಆಗಲಿದೆ. ವಿದೇಶ ಪ್ರವಾಸಕ್ಕೆ ತೆರಳುವ ಅವಕಾಶ ದೊರೆಯುವ ಸಾಧ್ಯತೆ ಕಂಡುಬಂದಲ್ಲಿ ವೀಸಾಗಾಗಿ ಗಂಭೀರವಾಗಿ ಪ್ರಯತ್ನಿಸಿ.

ಇನ್ನು ಉದ್ಯೋಗ ಸ್ಥಳದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಜತೆಯಲ್ಲಿ ಇದ್ದವರು, ನಿಮಗೆ ಆಪ್ತರಾದವರೇ ಅಡ್ಡಗಾಲಾಗುವ ಸಾಧ್ಯತೆ ಇದೆ.

ವೃತ್ತಿಪರರಿಗೆ ಖರ್ಚನ್ನು ನಿಭಾಯಿಸುವುದು ಬಹಳ ಕಷ್ಟವಾಗುತ್ತದೆ. ಸ್ವಂತ ಕಚೇರಿ ನಡೆಸುತ್ತಿರುವವರು ಏಕಾಏಕಿ ದೊಡ್ಡ ಮಟ್ಟದಲ್ಲಿ ಮಾಡುವ ಕಡೆಗೆ ಆಲೋಚನೆ ಮಾಡಬೇಡಿ.

ಅದೃಷ್ಟ ಸಂಖ್ಯೆ:- 2

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಕರ್ಕಾಟಕ ರಾಶಿ

ಸರ್ಕಾರಿ ಉದ್ಯೋಗಿಗಳು ಕಾನೂನು ದಾರಿಯ ಮೂಲಕ ಸಿಗಬೇಕಾದ ಸ್ಥಾನಮಾನಗಳಿಗಾಗಿ ಹೋರಾಟ ನಡೆಸಬೇಕಾಗುತ್ತದೆ. ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಹಣಕಾಸು ಹರಿವು ಉತ್ತಮವಾಗಿದ್ದರೂ ಅದನ್ನು ದಕ್ಕಿಸಿಕೊಳ್ಳಲು ಹರಸಾಹಸವನ್ನು ಪಡಬೇಕಾಗುತ್ತದೆ.

ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿದ್ದಲ್ಲಿ ಸಣ್ಣ – ಪುಟ್ಟ ವಿಚಾರಕ್ಕೆ ಮನಸ್ತಾಪಗಳು ಹಾಗೂ ಬೇರ್ಪಡುವ ಮಾತುಗಳು ಪದೇಪದೇ ಕೇಳಿಬರುತ್ತವೆ. ವಿದೇಶ ಪ್ರಯಾಣದ ವೇಳೆ ಪಾಸ್ ಪೋರ್ಟ್ ಮೊದಲಾದ ಅಗತ್ಯ ದಾಖಲಾತಿಗಳನ್ನು ಜೋಪಾನ ಮಾಡಿಟ್ಟುಕೊಳ್ಳಿ.

ಅದೃಷ್ಟ ಸಂಖ್ಯೆ:-1

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಸಿಂಹ ರಾಶಿ

ನಿಮ್ಮ ಒರಟು ಮಾತುಗಳು ಹಾಗೂ ಇತರರ ಬಳಿ ಆಡಿದ ಹಗುರ ಮಾತುಗಳಿಂದ ಅವಕಾಶ ವಂಚಿತರಾಗುವ ಸಾಧ್ಯತೆಗಳಿವೆ. ಆದರೆ ನಿಮಗೆ ಬರಬೇಕಾದ ದೊಡ್ಡ ಮೊತ್ತದ ಬಾಕಿ ಇದ್ದಲ್ಲಿ ಅದು ಬರುವ ಹಾಗೂ ಅದೇ ರೀತಿ ಖರ್ಚಾಗುವಂಥ ಯೋಗ ಇದೆ. ಹಾಗೂ ಹಣ ಕಾಸಿನ ವಿಚಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಎಚ್ಚರವಾಗಿರಿ. ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ನಡೆಸುತ್ತಿದ್ದಲ್ಲಿ ಅಂದುಕೊಂಡಷ್ಟು ಆದಾಯ ಬರುವುದಿಲ್ಲ. ಕೌಟುಂಬಿಕ ವ್ಯವಹಾರವನ್ನೇ ಮುಂದುವರಿಸಿಕೊಂಡು ಬರುತ್ತಿರುವವರಿಗೆ ಕಕ್ಷೀದಾರರ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗಲಿದೆ.

ಅದೃಷ್ಟ ಸಂಖ್ಯೆ:- 2

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಬಂಗಾರ ಧರಿಸುವಾಗ ಎಚ್ಚರ……! ಮುಚ್ಚದಿರಲಿ ಭಾಗ್ಯದ ಬಾಗಿಲು

ಕನ್ಯಾ ರಾಶಿ

ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ವಿಪರೀತ ಒತ್ತಡ ಇರುತ್ತದೆ. ವಕೀಲ ವೃತ್ತಿಯಲ್ಲಿ ಇರುವವರು, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವವರು ಆದಾಯ ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ತೀವ್ರಗೊಳಿಸಬೇಕಾಗುತ್ತದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮುಂದೆ ದಾರಿ ತೋಚದಂತೆ ಆಗುತ್ತದೆ.

ಮಾನಸಿಕವಾಗಿ ಕೆಲ ಸಮಯ ಬಿಡುವು ತೆಗೆದುಕೊಳ್ಳಬೇಕು ಎಂದು ಬಲವಾಗಿ ಅನಿಸುವುದಕ್ಕೆ ಶುರು ಆಗುತ್ತದೆ. ವೃತ್ತಿಪರರು ಸುಲಭವಾಗಿ ಹಣ ಮಾಡುವುದು ಹೇಗೆ ಎಂಬ ಕಡೆಗೆ ಗಮನ ಹರಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ, ಎಚ್ಚರ.

ಅದೃಷ್ಟ ಸಂಖ್ಯೆ:- 8

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ತುಲಾ ರಾಶಿ

ಈ ವರ್ಷ ದಿಢೀರನೇ ಉದ್ಯೋಗ ಬದಲಾಯಿಸುವ ಅಥವಾ ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮಗೆ ಇಷ್ಟ ಇಲ್ಲದಿದ್ದರೂ ಬದಲಾವಣೆಗೆ ಒಗ್ಗಿಕೊಳ್ಳಬಹುದಾದ ಅನಿವಾರ್ಯ ಎದುರಾಗಲಿದೆ.

ಇರುವ ಕೆಲಸವನ್ನು ಬಿಟ್ಟು, ಹೊಸ ವ್ಯವಹಾರ – ವ್ಯಾಪಾರ ಶುರು ಮಾಡಬೇಕು ಎಂಬ ಆಲೋಚನೆ ತೀವ್ರ ಆಗುತ್ತದೆ. ಆದರೆ ಈ ಅವಧಿಯಲ್ಲಿ ನಿಮ್ಮ ಏಕಾಗ್ರತೆ ಕೆಲಸದ ಕಡೆಗೆ ಹೆಚ್ಚಾಗಿರಬೇಕಾಗುತ್ತದೆ. ಇನ್ನು ವೃತ್ತಿಪರರು ಕಚೇರಿ ಬದಲಾವಣೆ, ನವೀಕರಣ ಎಂದು ಹೆಚ್ಚಿನ ಖರ್ಚು ಮಾಡದಿರುವುದು ಸೂಕ್ತ.

ಅದೃಷ್ಟ ಸಂಖ್ಯೆ:- 5

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವೃಶ್ಚಿಕ ರಾಶಿ

ಇನ್ನೇನು ಕೆಲಸ ಆಗಿಯೇ ಹೋಯಿತು ಎಂದುಕೊಳ್ಳುವ ಹೊತ್ತಿಗೆ ತುದಿಯಲ್ಲಿ ನಿಂತುಹೋಗಿ, ತಡವಾಗಲಿದೆ. ಬೇರೆ ಇಲಾಖೆಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಆದರೆ ಈ ಅವಧಿಯಲ್ಲಿ ಆದಾಯ ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು. ತೀರಾ ಚಿಂತೆ ಪಡುವಂಥ ಅಗತ್ಯ ಇಲ್ಲ.

ವೃತ್ತಿಪರರು ಆದಾಯದ ಸದ್ಬಳಕೆ ಬಗ್ಗೆ ಸರಿಯಾಗಿ ಯೋಚನೆ ಮಾಡಿಕೊಳ್ಳಬೇಕು. ತುಂಬ ಒಳ್ಳೆ ಹೆಸರಿದೆ ಎಂದು ನಂಬಿಕೊಂಡು, ಸಂಸ್ಥೆ ಅಥವಾ ವ್ಯಕ್ತಿಯೊಂದಿಗೆ ಮಾಡಿಕೊಂಡ ಒಪ್ಪಂದದಿಂದ ನಷ್ಟವಾಗುವ ಸಾಧ್ಯತೆಗಳಿವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ವ್ಯವಹಾರ ಒಪ್ಪಂದಗಳನ್ನು ಮಾಡಿಕೊಳ್ಳಿ.

ಅದೃಷ್ಟ ಸಂಖ್ಯೆ:- 4

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಧನಸ್ಸು ರಾಶಿ

ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಂಡರೂ ಸಾಧ್ಯವಾಗುವುದಿಲ್ಲ. ಇನ್ನೇನು ಕೆಲಸ ಸಿಕ್ಕೇಬಿಡ್ತು ಎನ್ನುವಷ್ಟರಲ್ಲಿ ಮುಂದಕ್ಕೆ ಹೋಗುತ್ತದೆ. ಸಾಲ ತೀರಿಸುವ ಒತ್ತಡದ ಕಾರಣಕ್ಕೆ ಶತಾಯಗತಾಯ ಪ್ರಯತ್ನಿಸುತ್ತೀರಿ. ಆದರೆ ಯಾವುದೇ ಪ್ರಯೋಜನ ಆಗುವುದಿಲ್ಲ.

ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಾಡುವ ಪ್ರಯತ್ನಗಳು ಯಶಸ್ವಿ ಆಗಲಿವೆ. ವೃತ್ತಿನಿರತರಿಗೆ ದೊಡ್ಡ ಸಂಸ್ಥೆಗಳ ಜತೆಗೆ ವ್ಯಾವಹಾರಿಕ ಒಪ್ಪಂದಗಳು ಆಗಲಿವೆ. ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಸ್ನೇಹಿತರ ಮೂಲಕ ಆಗುವ ಪರಿಚಯದಿಂದ ಅನುಕೂಲ ಇದೆ.

ಅದೃಷ್ಟ ಸಂಖ್ಯೆ:- 1

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮಕರ ರಾಶಿ

ತಂದೆ ಅಥವಾ ತಂದೆ ಕಡೆಯ ಸಂಬಂಧಿಕರ ಮೂಲಕ ತಿಳಿದುಬರುವ ಅವಕಾಶಗಳು ದಕ್ಕಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಪಡಬೇಕಾಗುತ್ತದೆ. ಚಿತ್ರರಂಗದಲ್ಲಿ ಇರುವವರಿಗೆ ನಿಮ್ಮ ಯೋಜನೆಗಳನ್ನು ಬೇರೆಯವರು ತಮ್ಮದೆಂದು ಹೇಳಿಕೊಂಡು, ಕೀರ್ತಿ- ಹಣ ಲಪಟಾಯಿಸುವ ಸಾಧ್ಯತೆ ಇದೆ. ಆದ್ದರಿಂದ ಯಾರನ್ನೂ ಕುರುಡಾಗಿ ನಂಬದಿರಿ.

ಕೆಲಸ ಬದಲಾವಣೆ ಮಾಡುವುದಿದ್ದರೆ ಅದಕ್ಕೆ ಅವಕಾಶ ದೊರೆಯಲಿದೆ. ಆದರೆ ಸಿಕ್ಕಾಪಟ್ಟೆ ಶ್ರಮ ಹಾಕಲೇಬೇಕು. ಇನ್ನು ವಿದೇಶಗಳಲ್ಲಿ ಉದ್ಯೋಗ ಸೇರಬೇಕು ಎಂದಿದ್ದರೆ ನೀವು ಸೇರಲಿರುವ ಕಂಪನಿಯ ಬಗ್ಗೆ ಕೂಲಂಕಷವಾಗಿ ವಿಚಾರಿಸಿ, ಮುಂದುವರಿಯಿರಿ.

ಅದೃಷ್ಟ ಸಂಖ್ಯೆ:- 9

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮನೆಯಲ್ಲಿ ಈ ಗಿಡವಿದ್ರೆ ಆರ್ಥಿಕ ವೃದ್ಧಿ ನಿಶ್ಚಿತ

ಕುಂಭ ರಾಶಿ

ನಿಮ್ಮದಲ್ಲದ ತಪ್ಪಿಗೆ ನಿಂದನೆಗಳನ್ನು ಕೇಳಬೇಕಾಗುತ್ತದೆ. ದೂರ ಪ್ರಯಾಣ ಮಾಡುವಾಗ ಆಹಾರ ಪಥ್ಯದ ಕಡೆಗೆ ಗಮನ ಇರಲಿ. ನಿಮಗೆ ವಹಿಸಿದ ಕೆಲಸಗಳನ್ನು ನೀವೇ ಮಾಡುವುದು ಉತ್ತಮ. ಯಾರ ಮೇಲಾದರೂ ಅತಿಯಾದ ನಂಬಿಕೆ ಇರಿಸಿ, ಮುಂದುವರಿದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಇತ್ಯರ್ಥ ಆಗುತ್ತದೆ. ನಿಮಗೆ ಬರಬೇಕಾದ ಹಣ ಬರಲಿದೆ. ದೂರ ಪ್ರಯಾಣದಲ್ಲಿ ಲಾಭ, ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಅನುಕೂಲ ಹೀಗೆ ನಾನಾ ಬಗೆಯ ಶುಭ ಫಲಗಳನ್ನು ಕಾಣಬಹುದು. ಆರೋಗ್ಯದಲ್ಲಿ ಚೇತರಿಕೆಯನ್ನೂ ನಿರೀಕ್ಷಿಸಬಹುದು. ಗುರುವಿನ ಅನುಗ್ರಹಕ್ಕಾಗಿ ಅಗತ್ಯ ಹವನ, ದಾನ- ಧರ್ಮ ಮಾಡುವುದು ಅಗತ್ಯ.

ಅದೃಷ್ಟ ಸಂಖ್ಯೆ:- 3

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮೀನ ರಾಶಿ

ಅದೃಷ್ಟ ಕೂಡ ಕೈ ಕೊಡುವುದಕ್ಕೆ ಶುರು ಆಗುತ್ತದೆ. ನಿಮ್ಮ ಮಾತು ಹೇಗೆ ಇರುತ್ತದೋ ಆ ರೀತಿಯಲ್ಲಿ ನೆಮ್ಮದಿ ಆಧಾರ ಪಟ್ಟಿರುತ್ತದೆ. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕೆಲವು ಕಾನೂನು ಅಡೆತಡೆಗಳು ಎದುರಾಗಬಹುದು.

ದಾಖಲೆ ಪತ್ರಗಳು ಜೋಪಾನವಾಗಿ ಇಟ್ಟುಕೊಳ್ಳಿ. ಕಾನೂನು ವಿರುದ್ಧವಾಗಿ ಅಥವಾ ಮೀರಿ ವರ್ತಿಸದಿರಿ. ಇದರಿಂದ ಬಹಳ ಸಮಯ ತೊಂದರೆ ಎದುರಿಸಬೇಕಾಗುತ್ತದೆ. ಉದ್ಯೋಗಸ್ಥರಿಗೆ ಏಕಾಗ್ರತೆ ಬಹಳ ಕಷ್ಟವಾಗಲಿದೆ. ಏರಿಳಿತಗಳು ಕಾಣಲಿದ್ದೀರಿ. ನಿಮ್ಮ ಬಗ್ಗೆ ಇತರರು ಅನುಮಾನ ಪಡದಿರುವಂತೆ ಪಾರದರ್ಶಕವಾಗಿ ಇರುವುದು ಉತ್ತಮ.

ಅದೃಷ್ಟ ಸಂಖ್ಯೆ:- 2

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವಿಳಾಸ:- ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ,

10th, ಕ್ರಾಸ್ ಮಹಾಗಣಪತಿ ದೇವಸ್ಥಾನದ ಹತ್ತಿರ,

ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...