alex Certify ಗುರು ರಾಯರ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುರು ರಾಯರ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ

ಉದ್ಯೋಗ ವಿಷಯದಲ್ಲಿ ಆತ್ಮೀಯರಿಂದ ಸೂಕ್ತ ಸಲಹೆ ಸಿಗಲಿದೆ. ಭೂಸಂಬಂಧಿ ವಿಷಯಗಳಲ್ಲಿ ಜಯ ಪ್ರಾಪ್ತಿ. ಕಳೆದು ಹೋದ ವಸ್ತುಗಳು ಪುನಃ ಸಿಗುವ ಸಾಧ್ಯತೆಯಿದೆ.

ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ವೈವಾಹಿಕ ಜೀವನ ರೋಮಾಂಚನಕರವಾಗಿರುವ ಸಾಧ್ಯತೆ. ಆರೋಗ್ಯದ ದೃಷ್ಟಿಯಿಂದ ಆಹಾರವನ್ನು ಸರಿಯಾದ ಸಮಯಕ್ಕೆ ಸ್ವೀಕರಿಸಬೇಕು.

ಅದೃಷ್ಟ ಸಂಖ್ಯೆ:- 9

ವೃಷಭ

ಕಾರ್ಯಗಳಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ಸಾಂಸಾರಿಕ ನೆಮ್ಮದಿ. ಮಹತ್ತರ ಯೋಜನೆ ನಿಮ್ಮನ್ನು ಅರಸಿ ಬರಲಿದೆ. ಗೃಹ ನಿರ್ವಹಣೆಯಿಂದ ಮನಸ್ಸಿಗೆ ಕಿರಿಕಿರಿ ಆಗುವುದು. ಧಾರ್ಮಿಕ ಕಾರ್ಯಕ್ರಮಗಳಿಗೆ ಮನಸ್ಸು ಮಾಡುವಿರಿ.

ಕಂಟಕಗಳು ಹುಡುಕಿಕೊಂಡು ಎದುರಿಗೆ ಬರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಆರೋಗ್ಯದಲ್ಲಿ ಹೊಸ ರೀತಿಯ ಖಾಯಿಲೆ ಸಂಭವಿಸಬಹುದು.

ಅದೃಷ್ಟ ಸಂಖ್ಯೆ:- 7

ಮಿಥುನ

ಉದ್ಯೋಗ ಕ್ಷೇತ್ರದಲ್ಲಿ ಗೊಂದಲಕರ ವಾತಾವರಣ. ವಾಹನಗಳಿಂದ ಲಾಭದ ನಿರೀಕ್ಷೆ. ಹೊಸದಾಗಿ ಆರಂಭಿಸುವ ಕೆಲಸ ಕಾರ್ಯಗಳು ಉತ್ತಮ ಫಲಿತಾಂಶ. ಮನೆಯವರೊಂದಿಗೆ ಮನರಂಜನೆಗಾಗಿ ಹೆಚ್ಚಿನ ಸಮಯ ಕಳೆಯುವಿರಿ.

ಆರೋಗ್ಯದ ವಿಚಾರದಲ್ಲಿ ಸ್ವಲ್ಪಮಟ್ಟಿನ ತೊಂದರೆ ಉಂಟಾಗುವುದು. ಸ್ನೇಹಿತರ ಸಹಾಯದಿಂದ ಅಗತ್ಯತೆಗಳನ್ನು ಪೂರೈಸಬಹುದು.

ಅದೃಷ್ಟ ಸಂಖ್ಯೆ: 5

ಕಟಕ

ವ್ಯವಹಾರಸ್ಥರಿಗೆ ಉತ್ತಮ ಫಲ, ಕೋರ್ಟ್‌ ಸಂಬಂಧಿ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ. ಮನೆಯಲ್ಲಿ ಆನಂದದ ವಾತಾವರಣ.

ಮನೆ ನಿರ್ಮಾಣಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಕೊಳ್ಳುವಿರಿ. ಹಣ ನೀರಿನಂತೆ ಖರ್ಚಾಗುವುದು. ಹಳೆಯ ಜಗಳ ಮರುಕಳಿಸುವ ಸಾಧ್ಯತೆ ಇರುವುದರಿಂದ ಹುಷಾರಾಗಿರಿ.

ಅದೃಷ್ಟ ಸಂಖ್ಯೆ:- 2

ಸಿಂಹ

ಸರ್ಕಾರಿ ಗುತ್ತಿಗೆದಾರರಿಗೆ ಬಾಕಿ ಹಣ ಸಂಪೂರ್ಣ ಸಂದಾಯವಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಅನಿರೀಕ್ಷಿತ ತಿರುವು ಕಂಡು ಬರುತ್ತೆ. ಸ್ವಂತ ನಿರ್ಧಾರಗಳಿಂದ ಫಲ ಹೆಚ್ಚು. ರಾಜಕಾರಣಿಗಳಿಗೆ ಯಶಸ್ಸಿನ ಜತೆ ಅಪವಾದವೂ ಇದೆ.

ನಿಮಗೆ ರಾಜಕೀಯ ಕ್ಷೇತ್ರಗಳಿಂದ ಸಂತೋಷ. ವ್ಯರ್ಥ ಖರ್ಚು ಆಗಬಹುದು. ವೈವಾಹಿಕ ಸಂಬಂಧದಲ್ಲಿ ಯಾರ ಕಡೆಯಿಂದ ಆದರೂ ತೊಂದರೆಯಾಗುತ್ತದೆ.

ಅದೃಷ್ಟ ಸಂಖ್ಯೆ:- 1

ವರ್ಕ್​ ಫ್ರಂ ಹೋಂ ಮಾಡುವವರು ಈ ವಾಸ್ತು ಟಿಪ್ಸ್‌ ಅನುಸರಿಸಿ

ಕನ್ಯಾ

ನೀವು ಬೊಜ್ಜು ಮತ್ತು ಮಧುಮೇಹ ಸಮಸ್ಯೆಗಳಿಂದ ಮುಕ್ತರಾಗಿರಲು ವ್ಯಾಯಾಮ ಮಾಡಿ. ಪ್ರೀತಿಯ ಜೀವನದಲ್ಲಿ ಬದಲಾವಣೆಗಳು ಬರಬಹುದು ಮತ್ತು ನಿಮ್ಮ ಸಂಬಂಧವೂ ಕೊನೆಗೊಳ್ಳುವಂತಹ ಪರಿಸ್ಥಿತಿಯಲ್ಲೂ ಬರಬಹುದು.

ಹೆಣ್ಣಿನ ಸಹವಾಸದಿಂದ ತೊಂದರೆಯಾಗಬಹುದು. ಸ್ನೇಹಿತರಿಂದ ಅಪಮಾನ ಎದುರಾಗುತ್ತದೆ.

ಅದೃಷ್ಟ ಸಂಖ್ಯೆ:- 5

ತುಲಾ

ಆರೋಗ್ಯದ ಕಡೆ ಗಮನ ನೀಡಿ. ದೀರ್ಘಕಾಲದಿಂದ ಚಿಂತಿಸುತ್ತಿರುವ ಯೋಚನೆಯೊಂದು ಕಾರ್ಯರೂಪಕ್ಕೆ ಬರಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಜನರಿಂದ ಉತ್ತಮ ಸಹಕಾರ ದೊರಕಲಿದೆ.

ಅಮೂಲ್ಯ ಸಮಯ ವ್ಯರ್ಥ. ಹಣಕಾಸಿನ ವಿಚಾರದ ಕೆಲಸ ಮಾಡುತ್ತಿದ್ದರೆ ಸರಿಯಾದ ನಿರ್ಧಾರ ಕೈಗೊಳ್ಳುವ ಅಗತ್ಯ. ಕುಟುಂಬದ ಸದಸ್ಯರ ವಿರುದ್ಧ ಮಾತುಕತೆ.

ಅದೃಷ್ಟ ಸಂಖ್ಯೆ:- 6

ವೃಶ್ಚಿಕ

ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಸುಬ್ರಹ್ಮಣ್ಯ ಆರಾಧನೆ ಶುಭ ತರಲಿದೆ. ಉದ್ಯೋಗದಲ್ಲಿ ಯಶಸ್ಸು. ಆರೋಗ್ಯದಲ್ಲಿ ಸಾಮಾನ್ಯ ಪ್ರಗತಿ. ತೀರ್ಥಕ್ಷೇತ್ರ ಯಾತ್ರೆ ಕೈಗೊಳ್ಳುವ ಬಗ್ಗೆ ಚಿಂತಿಸುವ ಸಾಧ್ಯತೆ.

ರಾಜಕೀಯ ವಿಷಯದಲ್ಲಿ ಗಂಭೀರ ಚಿಂತನೆ ನಡೆಸಲಿದ್ದೀರಿ. ಹೊರದೇಶದ ಯೋಗ ಕಂಡುಬರುವುದಿಲ್ಲ. ದೀರ್ಘ  ಪ್ರಯಾಣದ ಮೂಲಕ ಆಯಾಸ.  ವಿದ್ಯಾಭ್ಯಾಸ ಪ್ರಾರಂಭ ಮಾಡುವ ಉತ್ತಮ ದಿನ.

 ಅದೃಷ್ಟ ಸಂಖ್ಯೆ:- 1

ಧನುಸ್ಸು

ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಲಿದೆ. ವಿವಾಹಾಕಾಂಕ್ಷಿಗಳಿಗೆ ವಿವಾಹ ಭಾಗ್ಯ. ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ನಿರೀಕ್ಷಿತವಾದ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಎದುರಾಗುವ ಸಾಧ್ಯತೆ.

ಉದ್ಯೋಗರಂಗದಲ್ಲಿ ಬದಲಾವಣೆ. ಮನೆಯಿಂದ ಹೊರಡುವಾಗ ಕುಲ ದೇವರನ್ನು ಪ್ರಾರ್ಥನೆ ಬಹಳ ಮುಖ್ಯ. ಪ್ರೀತಿಯಲ್ಲಿ ಒತ್ತಡ ಹೆಚ್ಚುತ್ತಿರುತ್ತದೆ.

ಅದೃಷ್ಟ ಸಂಖ್ಯೆ:- 3

ಮಕರ

ಖಾಸಗಿ ಕಂಪನಿಯಿಂದ ಬರಬೇಕಾದ ಹಣಕ್ಕೆ ತೊಂದರೆ ಎದುರಾಗಲಿದೆ. ಅಪರಿಚಿತರ ಜತೆ ಹಣಕಾಸಿನ ವ್ಯವಹಾರ ಬೇಡ. ಅನವಶ್ಯಕ ಚಿಂತೆಗಳಿಂದ ಅನಾರೋಗ್ಯ ಕಾಡುವುದು.

ಅಲಂಕಾರಿಕ ವಸ್ತುಗಳ ಮಾರಾಟದಿಂದ ಅನುಕೂಲವಿದೆ. ಸಂಪೂರ್ಣ ಶನಿ ಗ್ರಹವು ಸಮಸ್ಯೆಗಳಿಂದ ಬಳಲುತ್ತಿರವವರಿಗೆ ಫಲ ಸಂಭವಿಸುತ್ತದೆ.

ಅದೃಷ್ಟ ಸಂಖ್ಯೆ:- 8

ದಿನ ನಿತ್ಯದ ಜೀವನದಲ್ಲಿರಲಿ ಸರಳ ವಾಸ್ತು ಟಿಪ್ಸ್

ಕುಂಭ

ಅನೇಕ ದೀರ್ಘಕಾಲೀನ ಬದಲಾವಣೆಗಳಾಗಬಹುದು, ಮಕ್ಕಳಿಂದ ಸಂತೋಷದ ವಾತಾವರಣ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಣೆ. ಮಾನಸಿಕ ಶಾಂತಿಗಾಗಿ ದೇವಿ ಆರಾಧನೆ ಮಾಡಿ.

ಯಾರೊಬ್ಬರ ಮಧ್ಯಸ್ಥಿಕೆಯಿಂದ ಕೆಟ್ಟ ಪರಿಣಾಮ ಉಂಟಾಗುತ್ತದೆ. ಯಾರೊಬ್ಬರ ಸಹಾಯದಿಂದ ಉದ್ದಾರತೆ ಬರುವುದಿಲ್ಲ.  ಸ್ವಂತ ನಿರ್ಧಾರಗಳಿಂದ ಪ್ರಯತ್ನ ಬಹಳ ಮುಖ್ಯ.

ಅದೃಷ್ಟ ಸಂಖ್ಯೆ:- 6

ಮೀನ

ಉದ್ಯೋಗರಂಗದಲ್ಲಿನ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ. ಮೇಲಧಿಕಾರಿಗಳಿಂದ ಪ್ರೋತ್ಸಾಹ. ಆರ್ಥಿಕತೆ ಸುಧಾರಣೆಯಾಗಲಿದೆ. ಗಣಪತಿ ಆರಾಧನೆಯಿಂದ ವಿಘ್ನಗಳು ದೂರವಾಗಲಿವೆ.

ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಮಾರ್ಗದರ್ಶನ ಅಗತ್ಯ.  ಹಣಕಾಸು ನೀಡಿರುವವರು ವಾಪಸ್ಸು ಬರುವ ಮಿಶ್ರಫಲ. ಹೆಚ್ಚಿನ ಪ್ರಯತ್ನ ಅತ್ಮವಿಶ್ವಾಸದಿಂದ  ಮುಂದೆ ನಡೆಯಿರಿ.

ಅದೃಷ್ಟ ಸಂಖ್ಯೆ:- 3

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...