ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆಯನ್ನು ಮಾಡುತ್ತಾರೆ. ಆದರೆ ಶಿವನ ಜೊತೆಗೆ ಲಕ್ಷ್ಮಿದೇವಿಯ ಅನುಗ್ರಹ ಪಡೆಯಲು ಕಾರ್ತಿಕ ಮಾಸದ ಈ ದಿನದಂದು ಲಕ್ಷ್ಮಿ ಪೂಜೆ ಮಾಡಬೇಕು. ಇದರಿಂದ ಸಕಲ ಯೋಗ ಪ್ರಾಪ್ತಿಯಾಗುತ್ತದೆ.
ಕಾರ್ತಿಕ ಮಾಸದ ಹುಣ್ಣಿಮೆ ದಿನದಂದು ಸರ್ವ ಜಯಂಕರೀ ದೀಪಲಕ್ಷ್ಮಿ ಪೂಜೆ ಮಾಡಿ. ಆ ವೇಳೆ ಶಿವನ ಫೋಟೊ ಇಟ್ಟು ಶಿವನಿಗೆ ಪ್ರಿಯವಾದ ಹೂ, ಪತ್ರೆಯನ್ನು ಅರ್ಪಿಸಿ, ಲಕ್ಷ್ಮಿಯ ಸ್ವರೂಪವಾದ ದೀಪವನ್ನು ಹಚ್ಚಬೇಕು. ಈ ದೀಪಕ್ಕೆ ಕಮಲದ ನಾರಿನಿಂದ ತೆಗೆದ ಬತ್ತಿಯಿಂದ ತುಪ್ಪ ಹಾಕಿ ದೀಪಾರಾಧನೆ ಮಾಡಬೇಕು.
ಹಾಗೇ ಪೂಜೆಯ ವೇಳೆ “ಓಂ ನಮಃ ಶಿವಾಯ ಶುಭಂ ಶುಭಂ, ಕುರುಕುರು ಶನಮ ಶಿವಾಯ ಓಂ ನಮಃ” ಈ ಮಂತ್ರವನ್ನು 11 ಬಾರಿ ಹೇಳಬೇಕು. ಬಳಿಕ ಪಚ್ಚೆ ಕರ್ಪೂರದ ಆರತಿ ಬೆಳಗಿ, ಕಲ್ಲುಸಕ್ಕರೆ, ಬಾಳೆಹಣ್ಣನ್ನು ನೈವೇದ್ಯವಾಗಿ ಇಡಬೇಕು. ಹೀಗೆ ಮಾಡಿದರೆ ಶಿವ ಮತ್ತು ಲಕ್ಷ್ಮಿ ಇಬ್ಬರ ಅನುಗ್ರಹದಿಂದ ನಿಮಗೆ ಪುಣ್ಯ, ಅಷ್ಟ ಐಶ್ವರ್ಯ ದೊರೆಯುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003