alex Certify ‘ತಲ’ ಬಿರುದನ್ನ ನಯವಾಗೇ ನಿರಾಕರಿಸಿದ ಕೆ.ಎಲ್. ರಾಹುಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತಲ’ ಬಿರುದನ್ನ ನಯವಾಗೇ ನಿರಾಕರಿಸಿದ ಕೆ.ಎಲ್. ರಾಹುಲ್​

There's Only One Thala': KL Rahul's Humble Response to Fan After Super Over Run Out is a Win

ಚುಟುಕು ಕದನ ಐಪಿಎಲ್​ನ ವಿವಿಧ ಆವೃತ್ತಿಗಳಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡವನ್ನ ಮುನ್ನೆಡಿಸಿರೋ ಮಹೇಂದ್ರ ಸಿಂಗ್​ ಧೋನಿ ಚೆನ್ನೈ ಅಭಿಮಾನಿಗಳಿಂದ ತಲ( ನಾಯಕ) ಎಂಬ ಬಿರುದನ್ನ ಪಡೆದುಕೊಂಡಿರೋದು ಎಲ್ಲರಿಗೂ ತಿಳಿದ ವಿಚಾರ. ಚೆನ್ನೈ ಅಭಿಮಾನಿಗಳು ನೀಡಿರೋ ಈ ಬಿರುದಿಗೆ ಕೆ.ಎಲ್. ರಾಹುಲ್​ ಕೂಡ ದನಿಗೂಡಿಸಿದ್ದಾರೆ.

2020ರ ಐಪಿಎಲ್​ನಲ್ಲಿ 9 ಮ್ಯಾಚ್​ಗಳನ್ನ ಎದುರಿಸಿರೋ ಕಿಂಗ್ಸ್ ಇಲೆವನ್​ ತಂಡದ ನಾಯಕ ಕೆ.ಎಲ್. ರಾಹುಲ್​ 525 ರನ್​ಗಳನ್ನ ಕಲೆ ಹಾಕುವ ಮೂಲಕ ಆರೆಂಜ್​ ಕ್ಯಾಪ್​ನ್ನ ತನ್ನ ಬಳಿಯೇ ಇರಿಸಿಕೊಂಡಿದ್ದಾರೆ.

ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಿದ್ದ ಕಿಂಗ್ಸ್ ಇಲೆವನ್​ ಪಂಜಾಬ್​ ಮೊದಲು ಪಂದ್ಯವನ್ನ ಟೈ ಮಾಡಿಕೊಳ್ತು. ಬಳಿಕ ಸೂಪರ್​ ಓವರ್​ನಲ್ಲೂ ಮ್ಯಾಚ್ ಡ್ರಾ ಆಯ್ತು. ಕೊನೆಗೆ ಎರಡನೇ ಬಾರಿ ನಡೆಸಿದ ಸೂಪರ್​ ಓವರ್​ ಮ್ಯಾಚ್​ನಲ್ಲಿ ಕಿಂಗ್ಸ್ ಇಲೆವನ್​ ಪಂಜಾಬ್​ ತಂಡ ಗೆಲುವಿನ ನಗೆ ಬೀರಿತು.

ಎರಡನೇ ಸೂಪರ್​ ಓವರ್​ನಲ್ಲಿ ಕ್ವಿಂಟನ್​ ಡಿ ಕಾಕ್​ರನ್ನ ಕೆ.ಎಲ್. ರಾಹುಲ್​ ರನ್​ ಔಟ್​ ಮಾಡಿ ಪೆವಿಲಿಯನ್​ ದಾರಿ ಹಿಡಿಸಿದ್ರು. ಪಂದ್ಯದಲ್ಲಿ ಪಂಜಾಬ್​ ಗೆದ್ದ ಮೇಲಂತೂ ಈ ರನ್​ಔಟ್​ ಟಾಕ್​ ಆಫ್​ ದ ಟೌನ್​ ಆಗಿ ಹೋಯ್ತು. ಕೆ.ಎಲ್. ರಾಹುಲ್​ ರನ್​ ಔಟ್​ ಮಾಡ್ತಿದ್ದ ಫೋಟೋ ಶೇರ್​ ಮಾಡಿದ್ದ ಫ್ಯಾನ್​ ಒಬ್ಬರು ‘ನನ್ನ ತಲ’ ಅಂತಾ ಕ್ಯಾಪ್ಶನ್​ ನೀಡಿದ್ದರು.

ಅಭಿಮಾನಿಗಳು ನೀಡಿದ ಈ ಬಿರುದನ್ನ ನಯವಾಗೇ ನಿರಾಕರಿಸಿದ ಕೆ.ಎಲ್. ರಾಹುಲ್​. ಐಪಿಎಲ್​ನಲ್ಲಿ ಇರೋದು ಒಬ್ಬರೇ ತಲ. ಅವರು ಯಾರೆಂದು ಎಲ್ಲರಿಗೂ ಗೊತ್ತಿದೆ ಅಂತಾ ಟ್ವೀಟಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...