alex Certify ಸುರೇಶ್ ರೈನಾ ಸಹೋದರ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರೇಶ್ ರೈನಾ ಸಹೋದರ ಇನ್ನಿಲ್ಲ

ಐಪಿಎಲ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಿಟ್ಟು ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಭಾರತಕ್ಕೆ ವಾಪಸ್ ಆಗಲು ಕೌಟುಂಬಿಕ ಕಾರಣವಿದೆ ಎಂದು ತಂಡ ಹೇಳಿತ್ತು.

ಆದ್ರೆ ತಂಡದ ಮಾಲೀಕ ಶ್ರೀನಿವಾಸನ್ ಬೇರೆ ಕಾರಣ ಹೇಳ್ತಿದ್ದಾರೆ. ಈ ಎಲ್ಲದರ ಮಧ್ಯೆ ಸುರೇಶ್ ರೈನಾ ಮತ್ತೊಂದು ಬೇಸರದ ಸಂಗತಿ ಹಂಚಿಕೊಂಡಿದ್ದಾರೆ.

ರೈನಾ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಅದ್ರಲ್ಲಿ ಪಂಜಾಬ್ ಪೊಲೀಸರಿಗೆ ನಮ್ಮ ಕುಟುಂಬದ ಮೇಲೆ ನಡೆದ ದಾಳಿ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಚಿಕ್ಕಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಚಿಕ್ಕಮ್ಮ ಹಾಗೂ ಸೋದರ ಸಂಬಂಧಿ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದರು. ಆದ್ರೆ ನಿನ್ನೆ ರಾತ್ರಿ ಸೋದರ ಸಂಬಂಧಿ ಸಾವನ್ನಪ್ಪಿದ್ದಾನೆಂದು ಸುರೇಶ್ ರೈನಾ ಹೇಳಿದ್ದಾರೆ.

ಆ ರಾತ್ರಿ ಏನಾಗಿತ್ತು ಎಂಬುದು ನಮಗೆ ಇನ್ನೂ ತಿಳಿಯಲಿಲ್ಲ. ಪಂಜಾಬ್ ಪೊಲೀಸರಿಗೆ ನಾನು ಮನವಿ ಮಾಡ್ತೇನೆ. ಯಾರು ಇದನ್ನು ಮಾಡಿದ್ದಾರೆಂಬುದನ್ನು ತಿಳಿಯುವ ಹಕ್ಕು ನಮಗಿದೆ ಎಂದು ರೈನಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...