alex Certify ಟ್ವೀಟ್‌ ಮಾಡದೆಯೂ ಸಖತ್‌ ಸುದ್ದಿಯಾಗಿದ್ದಾರೆ ಎಂ.ಎಸ್​. ಧೋನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವೀಟ್‌ ಮಾಡದೆಯೂ ಸಖತ್‌ ಸುದ್ದಿಯಾಗಿದ್ದಾರೆ ಎಂ.ಎಸ್​. ಧೋನಿ..!

ಪಾಪ್​ ಗಾಯಕಿ ರಿಹನ್ನಾ ರೈತ ಪ್ರತಿಭಟನೆ ಸಂಬಂಧ ಟ್ವೀಟ್​ ಮಾಡಿದ ಬಳಿಕ ಟೀಂ ಇಂಡಿಯಾ ಆಟಗಾರರು ಏಕತೆಯ ಸಂದೇಶವನ್ನ ಸಾರಿದ್ದಾರೆ. ವಿರಾಟ್​ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್​ ಶರ್ಮಾ ಸೇರಿದಂತೆ ಮಾಜಿ ಆಟಗಾರರಾದ ಸಚಿನ್​ ತೆಂಡೂಲ್ಕರ್, ಅನಿಲ್​ ಕುಂಬ್ಳೆ ಸೇರಿದಂತೆ ಇನ್ನೂ ಅನೇಕರು ನಮ್ಮ ದೇಶದ ಸಮಸ್ಯೆಯನ್ನ ನಾವೇ ಬಗೆಹರಿಸಿಕೊಳ್ತೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕರೆ ನೀಡಿದ್ದಾರೆ.

ಆದರೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಮಾತ್ರ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆಯನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಲ್ಲ. ಮೊದಲಿನಿಂದಲೂ ಸೋಶಿಯಲ್​ ಮೀಡಿಯಾದಿಂದ ಅಂತರ ಕಾಯ್ದುಕೊಂಡು ಬಂದಿರುವ ಧೋನಿ ಈ ವಿಚಾರದಲ್ಲಿಯೂ ತಮ್ಮ ಅಭ್ಯಾಸವನ್ನ ಮುಂದುವರಿಸಿದ್ದಾರೆ.

ಆದರೆ ಯಾವುದೇ ಟ್ವೀಟ್​ ಮಾಡದೆಯೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ ಕ್ಯಾಪ್ಟನ್​ ಕೂಲ್​..! ಈ ವಿಚಾರದಲ್ಲಿ ಧೋನಿ ಏಕೆ ಮೌನ ತಾಳಿದ್ದಾರೆ ಅಂತಾ ಅನೇಕರು ಪ್ರಶ್ನೆ ಮಾಡಿದ್ದರೆ ಇನ್ನೂ ಕೆಲವರು ಧೋನಿ ಕ್ರಿಕೆಟ್​ ಆಟಗಾರನಾಗಿ, ಭಾರತೀಯ ಸೇನೆಯಲ್ಲೂ ಸೇವೆ ಸಲ್ಲಿಸಿ, ಸ್ವತಃ ಒಬ್ಬ ರೈತನಾಗಿ ದೇಶಕ್ಕೆ ಅವರದ್ದೇ ಆದ ಕೊಡುಗೆ ಕೊಟ್ಟಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.

— ⚒️?️ Sridhar Sri ?️⚒️ (@sridhar_sri__) February 4, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...