alex Certify 2 ನೇ ಪಂದ್ಯ ಆರಂಭಕ್ಕೂ ಮೊದಲೇ ಟೀಂ ಇಂಡಿಯಾಗೆ ಬಿಗ್ ಶಾಕ್: ಕೊಹ್ಲಿ ಆಗಮನದಿಂದ ಆನೆ ಬಲ ಬಂದ್ರೂ, ಮೂವರು ಸ್ಟಾರ್ ಆಟಗಾರರು ಹೊರಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ನೇ ಪಂದ್ಯ ಆರಂಭಕ್ಕೂ ಮೊದಲೇ ಟೀಂ ಇಂಡಿಯಾಗೆ ಬಿಗ್ ಶಾಕ್: ಕೊಹ್ಲಿ ಆಗಮನದಿಂದ ಆನೆ ಬಲ ಬಂದ್ರೂ, ಮೂವರು ಸ್ಟಾರ್ ಆಟಗಾರರು ಹೊರಕ್ಕೆ

ಮುಂಬೈನಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ತಂಡಕ್ಕೆ ಆಗಮಿಸಿರುವುದರಿಂದ ಭಾರತಕ್ಕೆ ಆನೆಬಲ ಬಂದಂತಾಗಿದೆ. ಆದರೆ, ಮೂವರು ಪ್ರಮುಖ ಆಟಗಾರರು ತಂಡದಿಂದ ಹೊರಗುಳಿಯುತ್ತಿರುವುದು ಆಘಾತ ಮೂಡಿಸಿದೆ.

ಸ್ಟಾರ್ ಆಟಗಾರರಾದ ಇಶಾಂತ್ ಶರ್ಮಾ, ರವೀಂದ್ರ ಜಡೇಜ ಮತ್ತು ಅಜಿಂಕ್ಯಾ ರಹಾನೆ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ.

ಈ ಮೂವರು ಗಾಯಗೊಂಡ ಪರಿಣಾಮ ಪಂದ್ಯದಿಂದ ಹೊರಗುಳಿದಿದ್ದಾರೆ. ಮೊದಲ ಟೆಸ್ಟ್ ನ ಕೊನೆಯ ದಿನ ಇಶಾಂತ್ ಶರ್ಮ ಎಡಗೈ ಕಿರುಬೆರಳಿಗೆ ಗಾಯವಾಗಿದೆ. ರವೀಂದ್ರ ಜಡೇಜ ಬಲ ಕೈ ಗಾಯದಿಂದ ಬಳಲುತ್ತಿದ್ದು, ಅಜಿಂಕ್ಯಾ ರೆಹಾನೆ ಫೀಲ್ಡಿಂಗ್ ಸಂದರ್ಭದಲ್ಲಿ ಎಡ ಮಂಡಿ ನೋವಿಗೆ ತುತ್ತಾಗಿದ್ದಾರೆ. ಈ ಕಾರಣದಿಂದ ಈ ಮೂವರು ಆಟಗಾರರು ಹೊರಗುಳಿಯಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...