alex Certify ರೇಸ್ ವೇಳೆಯಲ್ಲೇ ದುರಂತ: ಕುದುರೆ ಮೇಲಿಂದ ಬಿದ್ದು ಜಾಕಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಸ್ ವೇಳೆಯಲ್ಲೇ ದುರಂತ: ಕುದುರೆ ಮೇಲಿಂದ ಬಿದ್ದು ಜಾಕಿ ಸಾವು

ಹೈದರಾಬಾದ್: ಕುದುರೆ ರೇಸ್ ವೇಳೆ ಆಯತಪ್ಪಿ ಬಿದ್ದು ಜಾಕಿ ಸಾವನ್ನಪ್ಪಿದ ಘಟನೆ ಹೈದರಾಬಾದ್ ಮಲಕಪೇಟೆ ರೇಸ್ ಕ್ಲಬ್ ನಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರಾಜಸ್ಥಾನ ಮೂಲದ 25 ವರ್ಷದ ಕುದುರೆ ಸವಾರ ಜಿತೇಂದ್ರ ಸಿಂಗ್ ರೇಸ್ ನಡೆಯುವ ವೇಳೆ ಕುದುರೆ ಮೇಲಿಂದ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಜಾಕಿ ಕುದುರೆಯಿಂದ ಬಿದ್ದಿದ್ದರೂ ಯಾವುದೇ ಗಾಯಗಳು ಆಗಿಲ್ಲ. ಅವರಿಗೆ ಒಳ ಪೆಟ್ಟಾಗಿರಬಹುದೆಂದು ಹೇಳಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...